ಹೆಸರೆ ಹೇಳುವಂತೆ ಕರಾವಳಿಯ ಈ ಎಕ್ಸ್ಪ್ರೆಸ್ ವೈವಿಧ್ಯಮಯ ಸುದ್ದಿ ಸಂಚಯಗಳನ್ನು ನೀಡುವ ಮೂಲಕ ಜನ ಮಾನಸದಲ್ಲಿ ನೆಲೆಯಾಗುವ ಕಾರ್ಯ ಮಾಡುತ್ತಿರುವುದು ಸಂತಸದ ವಿಚಾರ.
ಅದರಲ್ಲೂ ಮುಖ್ಯವಾಗಿ ವೆಬ್ ಸೈಟ್ ಮೂಲಕ ಆರೋಗ್ಯ ಮಾಹಿತಿ ನೀಡುತ್ತಿರುವುದು ಒಂದು ಉತ್ತಮ ಹೆಜ್ಜೆ ಯಾಗಿದೆ. ಕರಾವಳಿ ಎಕ್ಸ್ಪ್ರೆಸ್ ಮೂಲಕ ಪ್ರಕಟಿಸಲಾದ ಆರೋಗ್ಯ ಮಾಹಿತಿಗೆ ಸಿಕ್ಕ ಸ್ಪಂದನೆಯೇ ವೆಬ್ ಸೈಟ್ ನ ಜನಪ್ರಿಯತೆಗೆ ಸಾಕ್ಷಿ ಎಂದರೆ ತಪ್ಪಾಗಲಾರದು.
ಇದಲ್ಲದೇ ಯುವ ಬರಹಗಾರರು, ಲೇಖಕರಿಗೆ ಕರಾವಳಿ ಎಕ್ಸ್ಪ್ರೆಸ್ ನಿಂದ ಸಿಗುತ್ತಿರುವ ಪ್ರೋತ್ಸಾಹ ಹೊಸ ಬರಹಗಾರರಿಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು. ಇನ್ನು ಮುಂದೆಯೋ ಕೂಡ ಕರಾವಳಿ ಎಕ್ಸ್ಪ್ರೆಸ್ ಇನ್ನಷ್ಟು ಇಂತಹ ಪ್ರಯತ್ನ ಗಳನ್ನು ಮುಂದುವರಿಸಲಿ.
ಹೊಸತನಕ್ಕೆ ಮಣೆ ಹಾಕುವ ಜೊತೆಗೆ ಓದುಗರ ಹಂಬಲಕ್ಕೆ ಇನ್ನಷ್ಟು ಬೆಂಬಲ ದೊರಕಲಿ ಎಂದು ಹಾರೈಸುವ
ಡಾ.ವಾಣಿಶ್ರೀ ಐತಾಳ್, “ಸಿರಿ” ಆಯುರ್ವೇದ ಚಿಕಿತ್ಸಾಲಯ, ಸಾಲಿಗ್ರಾಮ