ಹೆಜಮಾಡಿ ಗರಡಿ ಮನೆ ದಿ. ಹೆಚ್. ಪ್ರಭಾಕರ ಶೆಟ್ಟಿ ಹಾಗೂ ನಂದಳಿಕೆ ಐಸ್ರಬೆಟ್ಟು ದಿ. ಶಾರದಾ ಪಿ.ಶೆಟ್ಟಿಯವರ ಪುತ್ರ ಶಶಿರಾಜ ಪಿ. ಶೆಟ್ಟಿ (50 ವರ್ಷ) ಯವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಬೆಂಗಳೂರಿನಲ್ಲಿ ಜನವರಿ 4ರಂದು ಮೃತಪಟ್ಟಿರುತ್ತಾರೆ. ಶ್ರೀಯುತರು ಹೆಸರಾಂತ ಸಫ್ಟ್ ವೇರ್ ಕಂಪನಿ ಹೆಚ್. ಸಿ.ಎಲ್. ನ ಬೆಂಗಳೂರು ಕಚೇರಿಯಲ್ಲಿ ಹಿರಿಯ ಪ್ರಾಜೆಕ್ಟ್ ಮ್ಯಾನೇಜರ್ ಆಗಿ 2004ರಿಂದ ಕೆಲಸ ನಿರ್ವಹಿಸುತ್ತಿದ್ದರು. ಅವರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ. ಮೃತರ ಗೌರವಾರ್ಥ ಬೆಂಗಳೂರಿನ ವಿಜಯನಗರದಲ್ಲಿರುವ ಬಂಟರ ಸಂಘದ ಸಭಾ ಭವನದಲ್ಲಿ ಜನವರಿ 16ರಂದು ಮಧ್ಯಾಹ್ನ 12 ಗಂಟೆಗೆ ಶೃದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಮೃತರ ಕುಟುಂಬ ಸದಸ್ಯರು ತಿಳಿಸಿರುತ್ತಾರೆ.