ಯಾವುದೇ ಕ್ಷಣದಲ್ಲಿ ಕುಸಿಯಬಹುದಾದ ಸೇತುವೆಗೆ ಭೇಟಿ, ಪರಿಶೀಲನೆ

ಉಡುಪಿ: ಶಿರಿಬೀಡು ವಾರ್ಡ್ ನ ಧೂಮಾವತಿ ಮುಖ್ಯ ರಸ್ತೆಯಲ್ಲಿ ಹಾದು ಹೋಗುವ ರಾಜಕಾಲುವೆಗೆ ಅಡ್ಡಲಾಗಿ ನಿರ್ಮಿಸಿದ್ದ ನೂರು ವರ್ಷಕ್ಕಿಂತ ಹಳೆಯ ಸೇತುವೆಯು (ಪುಳಿಮಾರು ಸಂಕ ) ನಿನ್ನೆ ರಾತ್ರಿ ಕಲ್ಲಿನ ಅಡಿ ಪಂಚಾಂಗ ಕುಸಿತದಿಂದಾಗಿ ಸೇತುವೆಯ ಮೇಲ್ಬಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಸೇತುವೆಯೂ ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಇದೆ.

ಇಂದು ಸ್ಥಳವನ್ನು ಪರಿಶೀಲಿಸಿ ಸಾರ್ವಜನಿಕರ ಅಹವಾಲು ಆಲಿಸಿದ ಟಿ. ಜಿ ಹೆಗ್ಡೆಯವರು ಅತೀ ಶೀಘ್ರದಲ್ಲಿ ಸೇತುವೆಯನ್ನು ನವೀಕರಿಸಲಾಗುವುದು ಎಂದು ಹೇಳಿದರು.ಅಂಬಲಪಾಡಿ ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಶಿರಿಬೀಡು ವಾರ್ಡ್ ಸ್ಥಳೀಯ ಅಶೋಕ್ ಶೆಟ್ಟಿ ಪುಳಿಮಾರು ಮನೆ,ಮಹೇಶ್ ಶೆಟ್ಟಿ ಪುಳಿಮಾರು ಮನೆ, ವಿಶ್ವನಾಥ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply