ಉಡುಪಿ: ಉಡುಪಿಯಲ್ಲಿ ಸಾವರ್ಕರ್ ಭಾವಚಿತ್ರದೊಂದಿಗೆ “ಜೈ ಹಿಂದೂ ರಾಷ್ಟ್ರ” ಎಂಬ ಬ್ಯಾನರ್ ಪ್ರತ್ಯಕ್ಷವಾಗಿದೆ.ನಗರದ ಬ್ರಹ್ಮಗಿರಿ ಸರ್ಕಲ್ ನಲ್ಲಿ ಈ ಬ್ಯಾನರ್ ನ್ನು ಅಳವಡಿಸಲಾಗಿದೆ. ಪ್ರಮೋದ್ ಉಚ್ಚಿಲ, ಯೋಗೀಶ್ ಕುತ್ಬಾಡಿ ಮತ್ತು ಶೈಲೇಶ್ ದೇವಾಡಿಗ ಎಂಬವರು ಈ ಬ್ಯಾನರ್ ನ್ನು ಅಳವಡಿಸಿದ್ದು ಇದನ್ನು ತೆರವುಗೊಳಿಸುವಂತೆ ಪಿಎಫ್ ಐ ಆಗ್ರಹಿಸಿದೆ.