ಸಂಸ್ಕೃತಿ ಸಂಜೆ ಉದ್ಘಾಟನೆ

ಸಂಸ್ಕೃತಿ ಪ್ರತಿಷ್ಠಾನ ಉಡುಪಿ, ನಡುಮನೆ ಸಾಹಿತ್ಯ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಇದರ ಆಶಯದಲ್ಲಿ ಸಂಸ್ಕೃತಿ ಸಂಜೆ ಕಾರ್ಯಕ್ರಮವು ಮಣಿಪಾಲದ ತಪೋವನದಲ್ಲಿ ಶನಿವಾರ ನಡೆಯಿತು.

 ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿಯಾದ ಪೂರ್ಣಿಮಾ ಅವರು ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಕವನವನ್ನು ವಾಚಿಸುವ ಮೂಲಕ ಉದ್ಘಾಟಿಸಿದರು.

 ಸಮಾರಂಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೆೈ, ಅಧ್ಯಕ್ಷರಾದ ಪ್ರೊಫೆಸರ್ ಶಂಕರ್, ಸುಹಾಸಂ ಕಾರ್ಯದರ್ಶಿ ಕು.ಗೋ, ಕಾರ್ಯಕ್ರಮದ ಸಂಚಾಲಕಿ ಸಂಧ್ಯಾ ಶೆಣಿೈ , ಶ್ರೀನಿವಾಸ್ ಉಪಾಧ್ಯ ,ತಪೋವನದ ಮುಖ್ಯಸ್ಥೆ ರೇವತಿ ನಾಡಿಗೇರ್, ತಾಲ್ಲೂಕು ಕಸಾಪ ಅಧ್ಯಕ್ಷ ರವಿರಾಜ್ ಹೆಚ್. ಪಿ , ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಇನ್ನಿತರರು ಉಪಸ್ಥಿತರಿದ್ದರು.

ಸಾಹಿತಿಗಳು ಕಲಾವಿದರು ಕಲಾಪ್ರೇಕ್ಷಕರು ಕಾರ್ಯಕ್ರಮದಲ್ಲಿ ಮಾತುಕತೆ ,ಸಂವಾದ ,ಹಾಡು ,ಏಕಪಾತ್ರ ಅಭಿನಯ, ಕವನ ವಾಚನ ,ಕಥಾ ವಚನ ದ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡರು.

 
 
 
 
 
 
 
 
 
 
 

Leave a Reply