ಸಾಲಿಗ್ರಾಮ- ಮಹಿಳಾ ವೇದಿಕೆ ಸಾಲಿಗ್ರಾಮ ಇವರಿಂದ ವಿಶ್ವ ಮಹಿಳಾ ದಿನಾಚರಣೆ ,ಸಾಧಕರಿಗೆ ಗೌರವ

ಕೋಟ: ಮಹಿಳಾ ವೇದಿಕೆ, ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗಸoಸ್ಥೆ ಇವರಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶ್ರೀ ಗುರುನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಇತ್ತೀಚಿಗೆ ನಡೆಯಿತು.
ಎಂ.ಐ.ಟಿ. ಮಣಿಪಾಲ ಇಲ್ಲಿನ ಪ್ರಾಧ್ಯಾಪಕಿ ಡಾ.ಗೀತಾ ಮಯ್ಯ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿ ಲಿಂಗ ತಾರತಮ್ಯವಿಲ್ಲದೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕ ವಾತಾವರಣ ಕುಟುಂಬ ಮತ್ತು ಸಮಾಜ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷ ಡಾ. ಕೆ. ಎಸ್.ಕಾರಂತ ಆಶಯದ ನುಡಿಗನ್ನಾಡಿದರು.

ಕೂಟಮಹಾಜಗತ್ತು ಅಂಗಸoಸ್ಥೆ ಅಧ್ಯಕ್ಷ ಶ್ರೀಪತಿ ಅಧಿಕಾರಿ ಶುಭಾಶಂಸನೆಗೈದರು. ಎಂಭತ್ತರ ವಯಸ್ಕ ೮ ಜನ ಹಿರಿಯ ತಾಯಂದಿರನ್ನು ಸನ್ಮಾನಿಸಲಾಯಿತು. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಗೀತಾ ತುಂಗ , ಶ್ರೀ ಲತಾ ಅಡಿಗ , ಶ್ರೀದೇವಿ ಹಂದೆ, ಮೂಕಾಂಬಿಕಾ ಮಯ್ಯ, ಲಲಿತಾ ಉಪಾಧ್ಯ, ವನಿತಾ ಉಪಾಧ್ಯ, ಶ್ರೀಮತಿ ಉಪಾಧ್ಯ ಇವರನ್ನು ಗೌರವಿಸಲಾಯಿತು.

ಮಹಿಳಾ ಸಬಲೀಕರಣ ಪೂರಕವಾಗಿ ಸ್ವ ಉದ್ಯೋಗ ನಡೆಸುವ ಮಲ್ಲಿಕಾ ಮಧ್ಯಸ್ಥ, ಶಾಲಿನಿ ತುಂಗ, ಶ್ರೀಮತಿ ಮಯ್ಯ, ರಾಧಿಕಾ ಸೋಮಯಾಜಿ, ಶಶಿಕಲಾ ಐತಾಳ, ಗಾಯತ್ರಿ ಹೊಳ್ಳ, ಸುಮಿತ್ರ ಉಪಾಧ್ಯ ಇವರನ್ನು ಗೌರವಿಸಲಾಯಿತು. ಬ್ರಹ್ಮಾವರ ಪಿ ಯು ಕಾಲೇಜಿನ ಉಪನ್ಯಾಸಕಿ ಮಂಗಳೂರು ವಿಭಾಗದ ಎನ್.ಎಸ್ ಎಸ್. ಅಧಿಕಾರಿ ಸವಿತಾ ಎರ್ಮಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಇನ್ನೋರ್ವ ಉಪಾಧ್ಯಕ್ಷೆ ವಿಜಯಲಕ್ಷ್ಮೀ ತುಂಗ, ಕಾರ್ಯದರ್ಶಿ ಶಿವಪ್ರಭಾ ಅಲ್ಸೆ, ಭಾರತಿ ಪ್ರಕಾಶ್ ಹೇರ್ಳೆ, ಲತಾ ಹೊಳ್ಳ, ನಾಗರತ್ನ ಹೇರ್ಳೆ, ಮಾಲತಿ ರಾವ್ ,ಸುಜಾತ ಬಾಯರಿ, ಜಯಶ್ರೀ ಮಧ್ಯಸ್ಥ ಸನ್ಮಾನಪತ್ರ ವಾಚಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ ಸಿ ಹೊಳ್ಳ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪೂರ್ಣಿಮಾ ಅಧಿಕಾರಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆ ಉಪಾಧ್ಯಕ್ಷೆ ರೇವತಿ ಐತಾಳ ವಂದನಾರ್ಪಣೆ ಮಾಡಿದರು. ,

ಮಹಿಳಾ ವೇದಿಕೆ, ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗಸAಸ್ಥೆ ಇವರಿಂದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಎಂ.ಐ.ಟಿ. ಮಣಿಪಾಲ ಪ್ರಾಧ್ಯಾಪಕಿ ಡಾ.ಗೀತಾ ಮಯ್ಯ ಇವರನ್ನು ಸನ್ಮಾನಿಸಲಾಯಿತು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷ ಡಾ. ಕೆ. ಎಸ್.ಕಾರಂತ, ಕೂಟಮಹಾಜಗತ್ತು ಅಂಗಸAಸ್ಥೆ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ ಸಿ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply