ಸಗ್ರಿ ನಾಗಮಂಡಲೋತ್ಸವ: ಚಪ್ಪರ ಮುಹೂರ್ತ

ಉಡುಪಿಯ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಪ್ರಿಲ್ 8 ರಿಂದ 11 ನೇ ತಾರೀಖಿನ ವರೆಗೆ ನಡೆಯಲಿರುವ ನವನಿರ್ಮಿತ ಶಿಲಾಮಯ ನಾಗದೇವರ ಗುಡಿ ಸಮರ್ಪಣೆ , ಪುನಃ ಪ್ರತಿಷ್ಠಾಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವ ಕ್ಕೆ ಭೂಮಿ ಪೂಜಾ ಪೂರ್ವಕ ಚಪ್ಪರ ಮುಹೂರ್ತವು ಬುಧವಾರ ನೆರವೇರಿತು.‌ ಪ್ರೇಮಚಂದ್ರ ಐತಾಳ್ ಪೂಜೆ ನೆರವೇರಿಸಿದರು.

ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ , ನ್ಯಾಯವಾದಿ ಪಿ ಎನ್ ಪ್ರಸನ್ನಕುಮಾರ್ ರಾವ್ , ಉಡುಪಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಿಟ್ಟೂರು ಬಾಲಕೃಷ್ಣ ಶೆಟ್ಟಿ , ನಗರಸಭಾ ಸದಸ್ಯರಾದ ಗಿರಿಧರ ಆಚಾರ್ಯ , ಗೀತಾ ಶೇಟ್ , ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು ‌ . ಆಡಳಿತ ಮೊಕ್ತೇಸರ ನಾಗಪಾತ್ರಿ ಗೋಪಾಲಕೃಷ್ಣ ಸಾಮಗ , ಲತಾ ಸಾಮಗ , ಗುತ್ತಿಗೆದಾರ ಮಂಜು ನಾಥ ಹೆಬ್ಬಾರ್ , ರಾಜೇಶ್ ಶೇಟ್ , ಸುಬ್ರಹ್ಮಣ್ಯ ಭಟ್ ವಾಸುದೇವ ಭಟ್ , ಶ್ರೀಪತಿ ಭಟ್ ಮೊದಲಾದವರಿದ್ದರು .

 
 
 
 
 
 
 
 
 
 
 

Leave a Reply