ಉತ್ತರ ಪ್ರದೇಶದ 17 ಬಾಲಕರಿಗೆ ಸಾಮೂಹಿಕ ಬ್ರಹ್ಮೋಪದೇಶ

ನವದೆಹಲಿಯ ವಸಂತ್ ಕುಂಜ್ ನಲ್ಲಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರಿಂದ ಸ್ಥಾಪಿತವಾದ ಉಡುಪಿ ಶ್ರೀ ಕೃಷ್ಣ ಧಾಮದಲ್ಲಿ ಸೋಮವಾರ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮವು ಅತ್ಯಂತ ವೈಭವದಿಂದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನೆರವೇರಿತು .
ಉತ್ತರ ಭಾರತದಲ್ಲಿ ತತ್ವ ಜ್ಞಾನ ಪ್ರಸಾರಕ್ಕಾಗಿ ಸ್ಥಾಪಿತವಾದ ಗುರುಕುಲದಲ್ಲಿ ಸುಮಾರು 40 ಕ್ಕೂ ಅಧಿಕ ವಿಪ್ರ ಬಾಲಕರುಗಳು ಕಳೆದ ಮೂರು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದು ಹಲವು ಅಧ್ಯಾಪಕರು ಅಧ್ಯಾಪನವನ್ನು ನಡೆಸುತ್ತಿದ್ದಾರೆ.‌

ಈ ಧಾರ್ಮಿಕ ವಿಧಿಯ ನೇತೃತ್ವವನ್ನು ಶ್ರೀ ಮಠದ ವ್ಯವಸ್ಥಾಪಕರಾದ ವಿದ್ವಾನ್ ದೇವಿಪ್ರಸಾದ ಆಚಾರ್ಯರು ವಹಿಸಿದ್ದರೆ ಸ್ಥಳೀಯ ಪುರೋಹಿತರಾದ ವಿದ್ವಾನ್ ರಾಕೇಶ್ ಯವರು ಧಾರ್ಮಿಕ ವಿಧಿ ವಿಧಾನಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.

ಇದೇ ಸಂದರ್ಭದಲ್ಲಿಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದಂಗಳವರು ಗುರುಕುಲದ ಹಾಗೂ ಸಂಶೋಧನಾ ಮಂದಿರದ ನಿದೇಶಕರಾಗಿ ಪೂರ್ಣ ಪ್ರಜ್ಞವಿದ್ಯಾಪೀಠದ ವಿದ್ವಾಂಸರಾದ ಡಾ.ವಿಠೋಬಾಚಾರ್ಯರನ್ನು ಡಾ.ಧನಂಜಯಾಚಾರ್ಯರಿಂದ ರಿಕ್ತವಾದ ಸ್ಥಾನದಲ್ಲಿ ನೂತನವಾಗಿ ನೇಮಿಸಿ ಆದೇಶಿಸಿದರು. ಈ ಸಂದರ್ಭದಲ್ಲಿ ಡಾ. ಗುರುರಾಜ ಕಲ್ಕೂರ ಹಾಗೂ ಶ್ರೀ ವಿದ್ವಾನ್ ಶ್ರೀ ನಿಧಿ ಆಚಾರ್ಯ ಅಧ್ಯಾಪಕರಾದ ವಿದ್ವಾನ್ ಅನುರಾಗ ಆಚಾರ್ಯ ಮಠದ ವ್ಯವಸ್ಥಾಪಕ ವಿದ್ವಾನ್ ದೇವೀಪ್ರಸಾದ ಆಚಾರ್ಯ ಮೊದಲಾದವರು ಸಹಕರಿಸಿದರು .ಇದೇ ಸಂದರ್ಭದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಎಲ್ಲ ನೂತನ ವಟುಗಳಿಗೆ ತಪ್ತಮುದ್ರಾಧಾರಣೆ ಹಾಗೂ ಶ್ರೀನಾರಾಯಣ ಅಷ್ಟಾಕ್ಷರ ಮಂತ್ರೋಪದೇಶ ನೀಡಿ ಫಲ ಮಂತ್ರಾಕ್ಷತೆ ಸಹಿತ ಅನುಗ್ರಹಿಸಿದರು.

 
 
 
 
 
 
 
 
 
 
 

Leave a Reply