ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಹಿರಿಯಡಕ ಘಟಕದ ನೂತನ ಅಧ್ಯಕ್ಷರಾಗಿ ಶ್ರೀ ಮಹೇಶ್ ಪುತ್ರನ್ ಹಿರೇಬೆಟ್ಟು ಆಯ್ಕೆ

ನಾಡೋಜ ಡಾ|| ಜಿ. ಶಂಕರ್ ರವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆಯ ಹಿರಿಯಡಕ ಘಟಕದ ನೂತನ ಅಧ್ಯಕ್ಷರಾಗಿ ಶ್ರೀ ಮಹೇಶ್ ಪುತ್ರನ್ ಹಿರೇಬೆಟ್ಟು ರವರು ಅವಿರೋಧವಾಗಿ ಆಯ್ಕೆಯಾದರು. ಶ್ರೀ ಕೃತಿಕ್ ಸಾಲಿಯಾನ್ ಬಜೆ ಯವರು ಕಾರ್ಯದರ್ಶಿಯಾಗಿ, ಶ್ರೀ ಪ್ರಶಾಂತ್ ಮದಗ ಜೊತೆ ಕಾರ್ಯದರ್ಶಿಯಾಗಿ, ಶ್ರೀ ಪ್ರಕಾಶ್ ಕೌಡೂರು ರವರು ಕೋಶಾಧಿಕಾರಿ ಆಯ್ಕೆಯಾದರು, ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಶ್ರೀ ರಾಜೇಂದ್ರ ಸುವರ್ಣ ರವರು ಸಭೆಯಲ್ಲಿ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು ನೂತನ ಪದಾಧಿಕಾರಿಗಳ ಪದ ಪ್ರಧಾನ ಸಂಮಾರಂಭವು ದಿನಾಂಕ : 20-03-2022 ರ ಭಾನುವಾರ ಪೂರ್ವಾಹ್ನ 11.00 ಗಂಟೆಗೆ ಮಾಧವ ಮಂಗಲ ಸಭಾ ಭವನ, ಅಂಜಾರು, ಹಿರಿಯಡಕದಲ್ಲಿ ನಡೆಯಲಿದೆ.

 
 
 
 
 
 
 
 
 
 
 

Leave a Reply