ಸ್ವಾತಂತ್ರ್ಯ ಅಮೃತ ಮಹೋತ್ಸವ ಫಿಟ್ ಇಂಡಿಯಾ ರಾಷ್ಟ್ರಮಟ್ಟದ ಕ್ರೀಡಾ ಕೂಟದ ವಿಜೇತರಿಗೆ ಅಭಿನಂದನೆ

ಉಡುಪಿ : ಬೆಂಗಳೂರಿನಲ್ಲಿ ಡಿ.5 ರಂದು ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಫಿಟ್ ಇಂಡಿಯಾ ರಾಷ್ಟ್ರಮಟ್ಟದ ಮುಕ್ತ ಟೇಕ್ವಾಂಡೋ ಕ್ರೀಡಾ ಕೂಟ 2021 ರಲ್ಲಿ ಭಾಗವಹಿಸಿದ ಉಡುಪಿ ಜಿಲ್ಲಾ ಟೇಕ್ವಾಂಡೋ ಆಸೋಸಿಯೇಶನ್ ವಿದ್ಯಾರ್ಥಿಗಳು 48 ಚಿನ್ನದ ಪದಕ 4 ಬೆಳ್ಳಿಯ ಪದಕ ಗಳಿಸಿದ ವಿದ್ಯಾರ್ಥಿಗಳನ್ನು ಶಿರಿಬೀಡಿನ ಗೌರಿ ಆರ್ಕೆಡ್ ನ ಮಾಲಕ ಲಯನ್ ವಾದಿರಾಜ್ ಗೌರಿ ಆರ್ಕೆಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀಜೆತರನ್ನು ಅಭಿನಂದಿಸಿದರು.

 ಮುಖ್ಯ ಶಿಕ್ಷಕ ರಾಜು ಕೆ.ಪಿ, ಶಿಕ್ಷಕರು ವರುಣ್, ಸೂರಜ್ ಕುಮಾರ್, ಸಂದೇಶ್, ದಾದಾಪಿರ್, ನೌಮಾನ್, ಹರ್ಷ ಕಾಮಾತ್, ಮತ್ತು ಸೂರಜ್ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply