ವೈದ್ಯಕೀಯ ಪ್ರಕೋಷ್ಠ; ಹಣ್ಣು ಹಂಪಲು ವಿತರಣೆ

ಉಡುಪಿ :- ವೈದ್ಯಕೀಯ ಪ್ರಕೋಷ್ಠ ಉಡುಪಿ ಜಿಲ್ಲೆ ಹಾಗೂ ಅಶ್ರಿತಾ ನಸಿ೯oಗ್ ಕಾಲೇಜು ಕೋಟ ಇದರ ಸಹಯೋಗದಲ್ಲಿ ಕೃಷ್ಣಾನುಗ್ರಹ ವಿಶೇಷ ಚೇತನರ ವಸತಿ ಗೃಹ ಮತ್ತು ದತ್ತು ಸ್ವೀಕಾರ ಕೇಂದ್ರದಲ್ಲಿ ಅಲ್ಲಿನ ಮಕ್ಕಳಿಗೆ ಹಣ್ಣು ಹಂಪಲುಗಳನ್ನು ಫೆ.13 ರಂದು ವಿತರಿಸಲಾಯಿತು.

ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಡಾ|| ರಾಮಚಂದ್ರ ಕಾಮತ್ ಮಾತನಾಡಿ, ಈ ರೀತಿಯ ಅನಾಥ ವಿಶೇಷ ಚೇತನರ ಮಕ್ಕಳಿಗೆ ಸಹಾಯ ಹಸ್ತ ಚಾಚುವುದು ನಮ್ಮ ಕತ೯ವ್ಯವಾಗಿದೆ ಎಂದರು.
ಕಾಲೇಜಿನ ಅಧ್ಯಕ್ಷ ಡಾ|| ವಿದ್ಯಾಧರ ಶೆಟ್ಟಿ ಎಲ್ಲಾ ಮಕ್ಕಳಿಗೆ ಹಣ್ಣು ಹಂಪಲು ಸಿಹಿ ತಿಂಡಿಗಳನ್ನು ವಿತರಿಸಿದರು.

ಈ ಸಂದಭ೯ದಲ್ಲಿ ಆಶ್ರಮದ ಸಂಚಾಲಕ ಡಾ|| ಉಮೇಶ್ ಪ್ರಭು, ಡಾ|| ಎನ್.ಟಿ ಅಂಚನ್, ಕುಂದಾಪುರ ಮಂಡಲ ಸಂಚಾಲಕ ಡಾ|| ರವೀಂದ್ರ ರಾಜ್ಯ ಸಮಿತಿಯ ಸದಸ್ಯ ಡಾ|| ವಿಜಯೀoದ್ರ ವಸಂತ್, ಡಾ|| ಸುದಶ೯ನ್ ಹೆಬ್ಬಾರ್’, ಮತ್ತು ಸದಸ್ಯರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply