ರಾಜ್ಯಮಟ್ಟದ ಜಲಜಾನಪದೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೈಂದೂರು : ಕನ್ನಡ ಜಾನಪದ ಪರಿಷತ್ ಬೆಂಗಳೂರು ಕರಾವಳಿ ವಿಭಾಗೀಯ ಘಟಕ ಜಲಜಾನಪದೋತ್ಸವ ಸಮಿತಿ ಮರವಂತೆ. 20-03-2022 ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಮರವಂತೆಯ ಕಡಲ ತಡಿಯಲ್ಲಿ ನಡೆಯುವ ರಾಜ್ಯಮಟ್ಟದ ಜಲಜಾನಪದೋತ್ಸವಕ್ಕೆ ಸಂಬಂಧಿಸಿ ಇಂದು ಖ್ಯಾತ ಉದ್ಯಮಿಗಳಾದ ಶ್ರೀ. ಆನಂದ ಸಿ ಕುಂದರ್ ಮತ್ತು ಗೀತಾ ಆನಂದ್ ಕುಂದರ್ ಅವರು ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.

ಹೌದು ಜಾನಪದ ಕಲೆ ಹಾಗೂ ಸಂಸ್ಕ್ರತಿಯನ್ನು ಬಿಂಬಿಸುವ ಈ ಉತ್ಸವ ಯಶಸ್ವಿಯಾಗಲಿ ಎಂದು ಶುಭಕೋರಿದರು.

ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗೀಯ ಘಟಕದ ಸಂಚಾಲಕಿ ಡಾ.ಭಾರತಿ ಮರವಂತೆ ಸ್ವಾಗತಿಸಿದರು.

ಜಲಜಾನಪದೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀ ಉದಯ್ ಕುಮಾರ್ ಬಿ ಹಾಯ್ಕಾಡಿ ವಂದಿಸಿದರು. ಜಲಜಾನಪದೋತ್ಸವದ ವಿವಿಧ ಸಮಿತಿಯ ಸಂಚಾಲಕರಾದ ಶ್ರೀ. ದಯಾನಂದ ಬಳೆಗಾರ್, ಶ್ರೀ ರವಿ ಮಡಿವಾಳ ಮರವಂತೆ, ಶ್ರೀ ಗಜೇಂದ್ರ ಖಾರ್ವಿ, ಶ್ರೀ ಕರುಣಾಕರ ಆಚಾರ್ಯ, ಶ್ರೀ ವಿಶ್ವನಾಥ್ ಶ್ಯಾನುಭಾಗ್ ಹಾಗೂ ಪ್ರಮುಖರು ಸ್ಥಳದಲ್ಲಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply