ಅವಹೇಳನಕಾರಿ ಹೇಳಿಕೆ ಅಥಾವುಲ್ಲ ಪುಂಜಾಲಕಟ್ಟೆ ಕ್ಷಮೆ ಯಾಚನೆಗೆ ಹಿಂದೂ ಯುವಸೇನೆ ಆಗ್ರಹ : ಮಂಜು ಕೊಳ

ಉಡುಪಿ: ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿಜಾಬ್ ವಿವಾದಕ್ಕೆ ಶಾಸಕ ರಘುಪತಿ ಭಟ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹಾಗೂ ಸಂಘ ಪರಿವಾರದ ಕುಮ್ಮಕ್ಕು ಎಂದು ಆಧಾರ ರಹಿತ ಆರೋಪ ಮಾಡಿ ಯಶ್ ಪಾಲ್ ಸುವರ್ಣ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಕೊಡಲೇ ಕ್ಷಮೆ ಯಾಚಿಸುವಂತೆ ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ಮಂಜು ಕೊಳ ಆಗ್ರಹಿಸಿದ್ದಾರೆ.

ಮತೀಯವಾದಿ ಸಂಘಟನೆಗಳು ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರದೊಂದಿಗೆ ಸೃಷ್ಟಿಸಿದ ಹಿಜಾಬ್ ವಿವಾದಕ್ಕೆ ತಮ್ಮ ದಿಟ್ಟ ನಿರ್ಧಾರದಿಂದ ತಕ್ಕ ಉತ್ತರ ನೀಡಿದ ಶಾಸಕರಾದ ಕೆ ರಘುಪತಿ ಭಟ್ ಹಾಗೂ ಯಶ್ ಪಾಲ್ ಸುವರ್ಣ ರವರ ನಡೆ ರಾಷ್ಟ್ರ ವಿರೋಧಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಾಲೇಜಿನ ಅಭಿವೃದ್ಧಿ ಹಾಗೂ ಬಡ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿರುವವರ ವಿರುದ್ಧ ಉದ್ದೇಶಪೂರ್ವಕವಾಗಿ ಗೂಬೆ ಕೂರಿಸಲು ಈ ಸಂಘಟನೆಗಳು ವಿಫಲಯತ್ನ ನಡೆಸುತ್ತಿದ್ದಾರೆ.

ಸಿಎಫ್ ಐ ರಾಜ್ಯಾಧ್ಯಕ್ಷ ಕೂಡಲೇ ಈ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು. ತಪ್ಪಿದಲ್ಲಿ ಹಿಂದೂ ಸಂಘಟನೆಗಳ ಮೂಲಕ ಜಿಲ್ಲೆಯಾದ್ಯಂತ ಮುಸ್ಲಿಮರೊಂದಿಗೆ ವ್ಯವಹಾರ ನಿರ್ಬಂಧಿಸಿ ಅಭಿಯಾನ ನಡೆಸಿ ಮುಸ್ಲಿಂ ವ್ಯಾಪಾರಿಗಳೊಂದಿಗೆ ವ್ಯವಹಾರ ನಡೆಸಲೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಶಾಸಕ ರಘುಪತಿ ಭಟ್, ಯಶ್ ಪಾಲ್ ಸುವರ್ಣ ಪರ ಹಿಂದೂ ಕಾರ್ಯಕರ್ತರು ಸದಾ ನಿಲ್ಲುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply