‘ಮಲಬಾರ್ ವಿಶ್ವರಂಗ ಪುರಸ್ಕಾರಕ್ಕೆ’ ಐವರು ಹಿರಿಯ ರಂಗಕರ್ಮಿಗಳ ಆಯ್ಕೆ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ, ಕಸಾಪ ಉಡುಪಿ ತಾಲೂಕು ಘಟಕ ಸಹಕಾರದೊಂದಿಗೆ ಪ್ರಧಾನ ಮಾಡುತ್ತಿರುವ ‘ಮಲಬಾರ್ ವಿಶ್ವರಂಗ ಪುರಸ್ಕಾರ 2022ಕ್ಕೆ ‘ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ.

ಕುಂದಾಪುರದ ಡಾ. ಪಾರ್ವತಿ ಜಿ. ಐತಾಳ (ನಾಟಕಕಾರರು ಹಾಗೂ ವಿಮರ್ಶಕರು), ಮುಂಬೈಯ ಡಾ| ಭರತ್ ಕುಮಾರ್ ಪೊಲಿಪು (ನಟ ಹಾಗೂ ನಿರ್ದೇಶಕರು ಹೊರ ರಾಜ್ಯ), ಉಡುಪಿಯ ಪ್ರಭಾಕರ್ ಬಂಡಾರಿ (ಸಂಘಟಕರು ತುಳುರಂಗಭೂಮಿ) ಮಂಗಳೂರಿನ ಅರೆಹೊಳೆ ಸದಾಶಿವ ರಾವ್ (ಸಂಘಟಕರು ಕನ್ನಡ ರಂಗಭೂಮಿ), ಹಾವೇರಿಯ ಶಂಕರ ಶಿವಪ್ಪ ತುಮ್ಮಣ್ಣನವರ (ನಟ ) ಇವರಿಗೆ ಮಾರ್ಚ್ 27ರಂದು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನಡೆಯುವ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ‘ಮಲಬಾರ್ ವಿಶ್ವರಂಗ ಪುರಸ್ಕಾರ’ ಪ್ರಧಾನ ಮಾಡಲಾಗುವುದು ಎಂದು ಸಮಿತಿಯ ಸಂಚಾಲಕರಾದ ರಾಜೇಶ್ ಭಟ್ ಪಣಿಯಾಡಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply