ವಿದುಷಿ ವಸಂತ ಲಕ್ಷ್ಮಿ ಹೆಬ್ಬಾರ್ ಅವರಿಗೆ ನುಡಿ ನಮನ

ಇತ್ತೀಚೆಗೆ ನಿಧನರಾದ ರಾಗಧನ (ರಿ) ಉಡುಪಿ, ಸಂಸ್ಥೆಯ ಆಜೀವ ಸದಸ್ಯರಾದ ವಿದುಷಿ ಶ್ರೀಮತಿ ವಸಂತ ಲಕ್ಷ್ಮಿ ಹೆಬ್ಬಾರ್ ಅವರಿಗೆ ಸಂಸ್ಥೆ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು. ಎಲ್ಲಾ ಸದಸ್ಯರು ವಸಂತ ಲಕ್ಷ್ಮಿ ಹೆಬ್ಬಾರ್ ಅವರ ಗುಣಗಾನ ಮಾಡಿದರು. ನಂತರ ಎರಡು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಅಧ್ಯಕ್ಷರಾದ ಡಾ. ಶ್ರೀ ಕಿರಣ ಹೆಬ್ಬಾರ್ ಅವರು, ಸಂಗೀತ, ಚಿತ್ರಕಲೆ ಹಾಗೂ ಸಂಗೀತ ಗುರುವಾಗಿ ವಸಂತ ಲಕ್ಷ್ಮಿ ಯವರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಸದಸ್ಯರಾದ ಶ್ರೀಮತಿ ಸರೋಜಾ ಆಚಾರ್ಯ, ರಾಘವೇಂದ್ರ ಆಚಾರ್, ಸದಾಶಿವ ರಾವ್ , ನಿತ್ಯಾನಂದ ರಾವ್,
ವಾರಿಜಾಾಕ್ಷಿ ಆರ್.ಎಲ್ ಭಟ್, ರೇಖಾ ಸಾಮಗ,ಡಾ.ಉದಯಶಂಕರ್ ಹಾಗೂ ಆರ್. ಎಲ್. ಭಟ್ ನುಡಿ ನಮನ ಸಲ್ಲಿಸಿದರು.ಕಾರ್ಯದರ್ಶಿ ಶ್ರೀಮತಿ ಉಮಾಶಂಕರಿ ಅವರು ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply