ಗುರುರಾಜ ಮಾರ್ಪಳ್ಳಿ ಅವರ ಕೃತಿ ಬಿಡುಗಡೆ

ಸಾಹಿತಿ ಗುರುರಾಜ ಮಾರ್ಪಳ್ಳಿ ಅವರ ಕೊಳಲಿನ ಸ್ವರಗಳು ಅನುಭವ ಕಥನ ಪುಸ್ತಕವನ್ನ ಇತ್ತೀಚಿಗೆ ಹಿರಿಯಸಾಹಿತಿ ವೈದೇಹಿಯವರು ಮಣಿಪಾಲದ ಇರುವಂತಿಗೆ ಸ್ವಗೃಹದಲ್ಲಿ ಬಿಡುಗಡೆಗೊಳಿಸಿದರು. ಕಲೆಯ ಪ್ರಪಂಚದ ಉನ್ನತ ಸಾಧಕರ ಅನುಭವಗಳ ದಾಖಲೆಗಳು ವರ್ತಮಾನ ಜಗತ್ತಿಗೆ ಅಗತ್ಯವಾಗಿದ್ದು ಅವುಗಳಿಂದ ಹೊಸ ಜನಾಂಗ ಪ್ರೇರಣೆ
ಪಡೆಯಲು ಸಾಧ್ಯ ಎಂದು ಕೃತಿಯ ಬಗ್ಗೆ ವೈದೇಹಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಗುರುರಾಜ ಮಾರ್ಪಳ್ಳಿ ಮಾತನಾಡುತ್ತ ತಾನು ಬರೆಯಲು ಶ್ರೀಮತಿ ವೈದೇಹಿ ಯವರ ಪ್ರೇರಣೆಯೇ ಕಾರಣವಾಗಿತ್ತು ಎಂದು, ಕಲೆಯ ಪ್ರಪಂಚದಲ್ಲಿ ಕೆಲಸ ಮಾಡಿದ ಉದ್ದಾಮ ವ್ಯಕ್ತಿತ್ವ ಗಳಾದ ಕಾರಂತ ಬಿ.ವಿ.ಕಾರಂತ, ಕೆ.ವಿ.ಸುಬ್ಬಣ್ಣ, ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ ಮುಂತಾದವರ ಜೊತೆಗೆ ಪಡೆದ ನೆನಪುಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿರಾಜ್ ಎಚ್. ಪಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply