ಭದ್ರಗಿರಿ ಸಂತ ಶ್ರೀ ಭದ್ರಗಿರಿ ಅಚ್ಯುತದಾಸರ ಪುಣ್ಣತಿಥಿ -ಹರಿಕಥಾ ಕಾಲಕ್ಷೇಪ

ಶ್ರೀ ಭದ್ರಗಿರಿ ವೀರವಿಠ್ಠಲ ದೇವಸ್ಥಾನದಲ್ಲಿ ಸಂತ ಶ್ರೀ ಭದ್ರಗಿರಿ ಅಚ್ಯುತದಾಸರ ಪುಣ್ಣತಿಥಿ ಸಂಸ್ಮರಣೆಯ ಅಂಗವಾಗಿ ಹರಿದಾಸ ಶ್ರೀ ಕೃಷ್ಣ ಪೈಯವರಿಂದ ಕನ್ನಡದಲ್ಲಿ ಪಾರ್ಥಸಾರಥ್ಯ ಹರಿಕಥಾ ಕಾಲಕ್ಷೇಪ ಸೇವೆ ನೆಡೆಸಿಕೊಟ್ಟರು . ಇದರ ಸೇವಾದಾರರು ಶ್ರೀ ಭದ್ರಗಿರಿ ಅಚ್ಯುತದಾಸರ ಮತ್ತು ಶ್ರೀ ಸರ್ವೋತ್ತಮ ಪೈ ,ಬೆಂಗಳೂರು ಇವರ ಕುಟುಂಬೀಕರು . ಹಾರ್ಮೊನಿಯಂನಲ್ಲಿ ಪ್ರಸಾದ್ ಮತ್ತು ತಬಲಾದಲ್ಲಿ ಪುರಂದರ ಕಿಣಿಯವರು ಸಹಕರಿಸಿದರು . ದೇವಳದ ವತಿಯಿಂದ ಹರಿದಾಸ ಶ್ರೀ ಕೃಷ್ಣ ಪೈ ರವರನ್ನು ಗೌರವಹಿಸಲಾಯಿತು , ಅಚ್ಯುತದಾಸರ ಪುತ್ರ ರಾಧಾಕೃಷ್ಣ ಪೈ , ಸಂತ ಅಚ್ಯುತದಾಸರ ಹಲವು ಕಾಲದ ಹಾರ್ಮೋನಿಯಂ ಸಹವಾದಕರಾಗಿದ್ದ ಗೋಪಾಲಕೃಷ್ಣ ಮಲ್ಯ, ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾದ ಭದ್ರಗಿರಿ ಪಾಂಡುರಂಗ ಆಚಾರ್ಯ, ಸದಸ್ಯರಾದ ಪ್ರಭಾಕರ ಭಟ್ , ಉದಯ ಪಡಿಯಾರ್, ಸುರೇಶ ಶೆಣೈ ಮತ್ತು‌ ಕಲ್ಯಾಣಪುರ ಸೀತಾರಾಮ ಭಟ್, ಮಾಧವರಾಯ ಪ್ರಭು, ಪರ್ಕಳ ಸಿ ಕೆ ಪ್ರಭು, ಹಾರಾಡಿ ಉಪೇಂದ್ರ ಶೆಣೈ, ಸುಧೀರ ಭಟ್, ಗೋಪಾಲಕೃಷ್ಣ ಕಾಮತ್, ನಿವೃತ್ತ ಪ್ರಾಂಶುಪಾಲರಾದ ಯೋಗಾನಂದ ಮತ್ತು ಹಲವು ಗಣ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply