ಕೊಲ್ಲೂರು ಶ್ರೀ ಮುಖಾಂಬಿಕಾ ದೇವಿ ದೇವಸ್ಥಾನಕ್ಕೆ 15ನೇ ವರ್ಷದ‌‌ ಪಾದಯಾತ್ರೆ

ಅಂಬಲಪಾಡಿ ಗ್ರಾಮ ಪಂಚಾಯತ್ ನ ಕ್ರಿಯಾಶೀಲ ಸದಸ್ಯರು & ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಂಬಲಪಾಡಿ ಇದರ ಅಧ್ಯಕ್ಷರೂ ಆಗಿರುವ ಸುನಿಲ್ ಕುಮಾರ್ ಕಪ್ಪೆಟ್ಟು ಅವರ ನೇತೃತ್ವದಲ್ಲಿ ಸತತ 15ನೇ ವರ್ಷದ‌‌ ಪಾದಯಾತ್ರೆ, ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ಧನ & ಮಹಾಕಾಳಿ ಅಮ್ಮನವರ ಸನ್ನಿಧಿಯಿಂದ ಕೊಲ್ಲೂರು ಶ್ರೀ ಮುಖಾಂಬಿಕಾ ದೇವಿ ದೇವಸ್ಥಾನದ ವರೆಗೆ, ಮುಂಜಾನೆ 3 ಗಂಟೆಗೆ ವರುಣ ದೇವನ ಕೃಪೆಯೊಂದಿಗೆ ಶುಭಾರಂಭವಾಯಿತು.

ಈ ಪಾದಯಾತ್ರೆ ಹೊರಡುವ ಶುಭ ಸಂಧರ್ಭದಲ್ಲಿ ನಮ್ಮ ಊರಿನ ಹಿರಿಯರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಂಬಲಪಾಡಿ ಇದರ ಕ್ರಿಯಾಶೀಲ ಹಿರಿಯ ಸದಸ್ಯರೂ ಆಗಿರುವ & ಊರಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಕಾರ ನೀಡಿ ಉತ್ಸಾಹದಿಂದ ಪಾಲ್ಗೊಳ್ಳುವ ಮೀರ್ ಮೊಹಮ್ಮದ್ ಅಸ್ಲಾಂ ಮತ್ತು ಅಂಬಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸೋಮನಾಥ ಬಿ ಕೆ, ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಸ್ಥಳೀಯ ಸಮಾಜ ಸೇವಕರಾದ ಅಜಿತ್ ಕಪ್ಪೆಟ್ಟು ಉಪಸ್ಥಿತರಿದ್ದು ಪಾದಯಾತ್ರೆಗೆ ಶುಭ ಹಾರೈಸಿದರು‌.

ಪಾದಯಾತ್ರೆಯಲ್ಲಿ ಸುನಿಲ್ ಕುಮಾರ್ ಕಪ್ಪೆಟ್ಟು ಅವರೊಂದಿಗೆ ರಂಜಿತ್ ಆಚಾರ್ಯ ಕಪ್ಪೆಟ್ಟು, ಭರತ್ ಕುಮಾರ್, ಕಿರಣ್ ಕುಮಾರ್, ಶಂಕರ ಪೂಜಾರಿ, ರಚಿತ್, ನಿತಿನ್, ಸತೀಶ್, ಲೋಕೇಶ್ ಆಚಾರ್ಯ, ಸತೀಶ್ ಕುತ್ಪಾಡಿ, ವಿಶ್ವನಾಥ್ ಪಾಲ್ಗೊಂಡಿದ್ದಾರೆ‌‌

 
 
 
 
 
 
 
 
 
 
 

Leave a Reply