ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಮಂಗಳೂರಿನಲ್ಲಿ ಸಕಲ ಸಿದ್ಧತೆ

ಮಂಗಳೂರು: ನ.5ರಂದು ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಮಂಗ ಳೂರು ಸಿದ್ಧಗೊಳುತ್ತಿದೆ. ಈಗಾಗಲೇ ಕಾರ್ಯಕಾರಿಣಿ ಸಭೆ ನಡೆಯುವ ಸಭಾಂಗಣ ಮತ್ತು ಕೋರ್ ಕಮಿಟಿ ಸಭೆ ನಡೆಯುವ ಹೊಟೇಲ್ ಓಷಿಯನ್ ಪರ್ಲ್ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಕಾರ್ಯಕಾರಣಿ ಸಭೆಗೆ ಆಗಮಿಸಲಿರುವ ಗಣ್ಯರಿಗೆ ಸ್ವಾಗತ ಫಲಕ ಅಳವಡಿ ಸಲಾಗಿದೆ.

ನಗರದ ಪಂಪ್‌ವೆಲ್ ವೃತ್ತದಿಂದ ಕಂಕನಾಡಿ, ಅಂಬೇಡ್ಕರ್ ವೃತ್ತ, ಪಿವಿಎಸ್‌ನಿಂದ ಲಾಲ್‌ಭಾಗ್‌ವರೆಗೆ ಹಾಗೂ ನಗರದ ವಿವಿಧ ಕಡೆ ಬಿಜೆಪಿಯ ಧ್ವಜ, ಕೇಸರಿ, ಹಸಿರು ಬಣ್ಣದ ಬಂಟಿಂಗ್ಸ್, ಕಟೌಟ್‌ಗಳ ಮೂಲಕ ಅಲಂಕರಿಸಲಾಗಿದೆ. ಬಿಜೆಪಿ ದ.ಕ. ಜಿಲ್ಲಾ ಘಟಕ ನೇತೃತ್ವ ದಲ್ಲಿ ಕಾರ್ಯಕರ್ತರು ಕಾರ್ಯಕಾರಿಣಿ ಸಭೆ ಅತ್ಯಂತ ಸುವ್ಯವಸ್ಥಿತವಾಗಿ, ಯಶಸ್ವಿಯಾಗಿ ನಡೆಸಲು ನಿರಂತರ ಶ್ರಮಿಸುತ್ತಿದ್ದಾರೆ. ಸೋಮ ವಾರ ನಗರದಲ್ಲಿ ತಾವೇ ಸ್ವತಃ ಅಲಂಕಾರದಲ್ಲಿ ತೊಡಗಿದ್ದರು.

ಇನ್ನು ಸಭೆಯಲ್ಲಿ ಭಾಗವಹಿಸುವ ಪಕ್ಷದ ಪ್ರಮುಖರು, ಗಣ್ಯರ ಸ್ವಾಗತ ಹಾಗೂ ವಸತಿ ವ್ಯವಸ್ಥೆಗೆ ಈಗಾಗಲೇ 16 ತಂಡಗಳು ಕೆಲಸ ನಿರ್ವಹಿ ಸುತ್ತಿವೆ. ಇನ್ನುಳಿದ ಎರಡು ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನೇತೃತ್ವದಲ್ಲಿ ಸಭೆಯ ಅಂತಿಮ ಸಿದ್ಧತೆ ಗಳು ನಡೆಯಲಿದೆ.

 
 
 
 
 
 
 
 
 
 
 

Leave a Reply