ಉಡುಪಿ : ಶ್ರೀಕೃಷ್ಣಾಪುರ ಮಠದ ಚತುರ್ಥ ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಲ್.ಐ.ಸಿ. ಆಫ್ ಇಂಡಿಯಾ ಉಡುಪಿ ವಿಭಾಗದ ಹಿರಿಯ ವಿಭಾಗೀಯ ಅಧಿಕಾರಿ ಬಿಂದು ರಾಬರ್ಟ್ ಉದ್ಘಾಟಿಸಿದರು.
ಶ್ರೀಕೃಷ್ಣನ ಸಂದೇಶದಂತೆ ಪ್ರಜೆಗಳ ಯೋಗ,ಕ್ಷೇಮಗಳಲ್ಲಿ ಉಡುಪಿಯ ಜನತೆಯೊಂದಿಗೆ ಎಲ್.ಐ.ಸಿ. ಯಾವತ್ತೂ ಭಾಗಿಯಾಗಲು ಸಂತೋಷ ಪಡುತ್ತೇವೆ ಎಂದರು.
ಉಡುಪಿ ವಿಭಾಗದ ಮಾರಾಟ ಅಧಿಕಾರಿ ರಮೇಶ್ ಭಟ್ ಹಾಗೂ ಉಡುಪಿ ವಿಭಾಗದ ಪ್ರಬಂಧಕ ಶ್ಯಾಮ್ ಸುಂದರ್ ಉಪಸ್ಥಿತರಿದ್ದರು. ಪರ್ಯಾಯೋತ್ಸವ ಸಮಿತಿಯ ಎಂ.ಎಲ್.ಸಾಮಗರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಕಾರ್ಯದರ್ಶಿ ವಿಷ್ಣು ಪಾಡಿಗಾರ್ ವಂದಿಸಿದರು.