ಕಿನ್ನಿಗೋಳಿ ಚರ್ಚಿನ ಧರ್ಮಗುರು ವಂ| ಮ್ಯಾಥ್ಯು ವಾಸ್‌ ಇನ್ನಿಲ್ಲ

ಮಂಗಳೂರು: ಕಥೊಲಿಕ್‌ ಸಭಾ ಮಂಗಳೂರು ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೇಶಕ, ಕಿನ್ನಿಗೋಳಿ ಚರ್ಚಿನ ಧರ್ಮಗುರು ವಂ| ಮ್ಯಾಥ್ಯು ಪ್ಯಾಟ್ರಿಕ್ ವಾಸ್‌ ಅವರು ಹೃದಯಘಾತದಿಂದ ನಿಧನರಾದರು. ಅವರಿಗೆ‌ 62 ವರ್ಷ ವಯಸ್ಸಾಗಿತ್ತು.

ಕಿನ್ನಿಗೋಳಿ ಇಮ್ಯಾಕುಲೆಟ್‌ ಆಫ್‌ ಕನ್ಸಪ್ಸನ್‌ ಚರ್ಚಿನ ಪ್ರಧಾನ ಧರ್ಮಗುರುವಾಗಿದ್ದ ಅವರು ಕಥೊಲಿಕ್‌ ಸಭಾ ಮಂಗಳೂರು ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೇಶಕರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದರು. ಈ ಮೊದಲು ಉಡುಪಿ, ಅಂಜೆಲೊರ್‌, ಕಾಸರಗೋಡಿ ಬೇಳಾ ಸೇರಿದಂತೆ ವಿವಿಧ ಚರ್ಚುಗಳಲ್ಲಿ ಸೇವೆಯನ್ನು ಸಲ್ಲಿಸಿದ್ದರು

ಅವರ ಅಂತಿಮ ಸಂಸ್ಕಾರ ಶನಿವಾರ ಅಕ್ಟೋಬರ್‌ 23 ರಂದು ಬೆಳಿಗ್ಗೆ 10 ಗಂಟೆಗೆ ಕಿನ್ನಿಗೋಳಿ ಇಮ್ಯಾಕುಲೇಟ್‌ ಕನ್ಸಪ್ಸನ್‌ ಚರ್ಚಿನಲ್ಲಿ ನಡೆಯಲಿದೆ ಎಂದು ಧರ್ಮಪ್ರಾಂತ್ಯದ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply