ಸುನೀಲ್ ಕುಮಾರ್ ರವರೇ ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು ದಾರಿ ತಪ್ಪಿಸ ಬೇಡಿ~ ಜನಾರ್ಧನ ಭಂಡಾರ್ಕರ್

  • 9/11 ಸಮಸ್ಯೆಯನ್ನು ಒಂದು ತಿಂಗಳ ಒಳಗೆ ಸರಿಪಡಿಸುತ್ತೇನೆ ಎಂದು ಕರ್ನಾಟಕ ಸರಕಾರದ ಸಚಿವರು ಮತ್ತು ಕಾರ್ಕಳ  ಶಾಸಕರಾದ ಸುನೀಲ್ ಕುಮಾರ್ ಪತ್ರಿಕಾ ಹೇಳಿಕೆಯನ್ನು ಕೊಟ್ಟಿದ್ದಾರೆ, ಬಹುವರ್ಷದ ಜನರ ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಗುತ್ತದೆ ಎಂದು ತುಂಬಾ ಸಂತೋಷ ವಾಗುತ್ತದೆ, ಸಚಿವರಿಗೆ ಅಭಿನಂದನೆ ಕೂಡ ಸಲ್ಲಿಸುತ್ತೇನೆ.
  • ಕೆಲವು ತಿಂಗಳ ಹಿಂದೆ ಉಡುಪಿಯ ಶಾಸಕರು ರಘುಪತಿ ಭಟ್ ರವರು ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದನ್ನು ಅಲ್ಲದೇ 15 ದಿನಗಳೊಳಗೆ ಈ ಬಗ್ಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕರು ವಿನಂತಿಸಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೆ.

    ಸುನೀಲ್ ಕುಮಾರ್ ರವರೇ 9/11 ಸಮಸ್ಯೆ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ದಾವೆ ಇರುವುದರಿಂದ ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು ದಾರಿ ತಪ್ಪಿಸ ಬೇಡಿ ಎಂದು ಉಡುಪಿ ನಗರಸಭೆಯ ಮಾಜಿ ಸದಸ್ಯರಾದ ಜನಾರ್ಧನ ಭಂಡಾರ್ಕರ್ ಅಭಿಪ್ರಾಯ ಪಟ್ಟಿದ್ದಾರೆ..

 
 
 
 
 
 
 
 
 
 
 

Leave a Reply