ಹೂವು ಕೊಯ್ಯುವ ಸಂದರ್ಭದಲ್ಲಿ ಕಾದು ಕುಳಿತ ಜವರಾಯ

ಬಂಟ್ವಾಳ : ಸಾವು ಯಾವ ರೀತಿಯಲ್ಲಿ ಕಾದು ಕುಳಿತುಕೊಂಡಿರುತ್ತದೆ ಎಂಬುದನ್ನು ಯಾರೂ ಹೇಳಲು ಸಾಧ್ಯವಿಲ್ಲ ಎಂಬುದಕ್ಕೆ ಇದೂ ಒಂದು ನಿದರ್ಶನವೆಂದರೂ ತಪ್ಪೇನಲ್ಲ. ಇಲ್ಲೊಬ್ಬಳು ಯುವತಿ ಹೂವು ಕೊಯ್ಯಲು ಹೋಗಿ ಎಡವಿದ್ದೇ ಪ್ರಾಣಕ್ಕೆ ಮುಳುವಾಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಕಾರಾಜೆ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಸ್ಥಳೀಯ ನಿವಾಸಿ ರಶ್ಮಿತಾ (24) ಸಾವಿಗೀಡಾದ ಯುವತಿ. ಹೂವನ್ನು ಕೊಯ್ಯಲೆಂದು ಕೆರೆ ದಡಕ್ಕೆ ಹೋಗಿದ್ದ ಈಕೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾಳೆ.

 
 
 
 
 
 
 
 
 
 
 

Leave a Reply