ಬಲಿಪ ಭಾಗವತರಿಗೆ ಯಕ್ಷಗಾನ ಕಲಾರಂಗದಿಂದ ಶ್ರದ್ಧಾಂಜಲಿ

ಉಡುಪಿ: ನಮ್ಮನ್ನಗಲಿದ ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತ ಬಲಿಪ ನಾರಾಯಣ ಭಾಗವತರಿಗೆ ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಸಂಸ್ಥೆ ಶ್ರದ್ಧಾಂಜಲಿ ಸಮರ್ಪಿಸಿತು. ಕಾರ್ಯದರ್ಶಿ ಮುರಲಿ ಕಡೆಕಾರ್ ಮತ್ತು ಶ್ರೀಮತಿ ವಿದ್ಯಾಪ್ರಸಾದ್ ಅಗಲಿದ ಚೇತನಕ್ಕೆ ನುಡಿನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಕಲಾವಿದರಾದ ಗುರುವಪ್ಪ ಬಾಯಾರು ,ಜಂಬೂರು ರಾಮಚಂದ್ರ ಶಾನುಭಾಗ್,ಸಂಸ್ಥೆಯ ಸದಸ್ಯರಾದ ಪ್ರಸಿದ್ಧ ಗಾಯಕರವಾದ ಎಚ್. ಚಂದ್ರಶೇಖರ ಕೆದ್ಲಾಯ, ಗಿಲ್ಬರ್ಟ್ ಡಿ.ಸಿಲ್ವಾ, ಪರಮೇಶ್ವರ ಸಾಲಿಯಾನ್, ತಮ್ಮಯ್ಯ ಶೇರಿಗಾರ್ ಹಾಗೂ ಸಂಸ್ಥೆಯ ಹಿತೈಷಿಗಳಾದ ಡಾ. ಶ್ರೀಧರ್ ಹೊಳ್ಳ ಮತ್ತು ಜಿ.ಅಚ್ಚುತ ಭಟ್ ಇವರಿಗೆ ಒಂದು ನಿಮಿಷದ ಮೌನಾಚರಣೆಯೊಂದಿಗೆ ಸದ್ಗತಿ ಪ್ರಾರ್ಥಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷರುಗಳಾದ ಎಸ್.ವಿ ಭಟ್, ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಮನೋಹರ್ ಕೆ. ಮತ್ತು ಜತೆಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಹೆಚ್.ಎನ್. ಶೃಂಗೇಶ್ವರ ಹಾಗೂ ಕಾರ್ಯಕಾರೀ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply