ಉಡುಪಿ: ಉಪಾಧ್ಯ ರೋಲರ್ ಸ್ಕೇಟಿಂಗ್ ಇದರ 17ನೇ ವರ್ಷದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ನೂತನ ಶಾಸಕರಾಗಿ ಆಯ್ಕೆಯಾದ ಶ್ರೀ ಯಶ್ ಪಾಲ್ ಸುವರ್ಣರವರಿಗೆ ಅಭಿನಂದನಾ ಸಮಾರಂಭವು ಇತ್ತೀಚಿಗೆ ಉಡುಪಿ ಅಜ್ಜರಕಾಡು ಸ್ಕೇಟಿಂಗ್ ರಿಂಕ್ ನಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಶ್ರೀ ಯಶ್ ಪಾಲ್ ಸುವರ್ಣ, ಮಾನ್ಯ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ ಭಾಗವಹಿಸಿದ್ದರು. ಅತಿಥಿಗಳಾಗಿ ಶ್ರೀ ಕೆ ರಘುಪತಿ ಭಟ್ ಮಾಜಿ ಶಾಸಕರು, ಉಡುಪಿ, ಶ್ರೀಮತಿ ರಶ್ಮಿ ಭಟ್, ಉಡುಪಿ ನಗರಸಭಾ ಸದಸ್ಯರು, ಅಜ್ಜರಕಾಡು ವಾರ್ಡ್, ಶ್ರೀ ಜಯಪ್ರಕಾಶ್ ಕೆದ್ಲಾಯ, ನ್ಯಾಯವಾದಿ ಹಾಗೂ ಸ್ಥಾಪಕ ಸದಸ್ಯರು, ಉಪಾಧ್ಯ ರೋಲರ್ ಸ್ಕೇಟಿಂಗ್ ಹಾಗೂ ಶ್ರೀ ಲಕ್ಷ್ಮೀನಾರಾಯಣ ಉಪಾಧ್ಯಾ, ಪ್ರಧಾನ ಕಾರ್ಯದರ್ಶಿ, ತರಬೇತುದಾರರು, ಉಪಾಧ್ಯಾ ರೋಲರ್ ಸ್ಕೇಟಿಂಗ್, ಉಡುಪಿ ಉಪಸ್ಥಿತರಿದ್ದರು. ಕೆ ಶ್ರೀಕಾಂತ್ ರಾವ್, ಏಕಲವ್ಯ ವಿಜೇತರು, ಅಧ್ಯಕ್ಷರು, ಉಪಾಧ್ಯ ರೋಲರ್ ಸ್ಕೇಟಿಂಗ್, ಉಡುಪಿ ತಮ್ಮ ಶುಭಾಶಯ ಕೋರಿದರು.