ರಸ್ತೆ ಅಗಲೀಕರಣ – ಭೂ ಮಾಲೀಕರೊಂದಿಗೆ ಸಭೆ ನಡೆಸಿದ ನಗರಸಭೆ ಅಧ್ಯಕ್ಷೆ

ಉಡುಪಿ: ಮಿಷನ್ ಕಾಂಪೌಂಡ್, ಬೈಲೂರು ರಸ್ತೆ ಅಗಲೀಕರಣ ಸಂಬಂಧ ಭೂಸ್ವಾಧೀನ ಪಡಿಸಲು ಟಿ.ಡಿ.ಆರ್. ಪ್ರಕ್ರಿಯೆಗೆ ನೋಟಿಫಿಕೇಶನ್ ಆಗಿರುವಂತೆ ಭೂಸ್ವಾಧೀನದ ಬಗ್ಗೆ ಭೂಮಾಲಕರೊಂದಿಗೆ ಉಡುಪಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಮಿತ್ರ ನಾಯಕ್ ಅವರು ಇಂದು ನಗರಸಭೆ ಸತ್ಯಮೂರ್ತಿ ಸಭಾಂಗಣದಲ್ಲಿ ಸಭೆ ನಡೆಸಿದರು. ಈ ಸಭೆಯಲ್ಲಿ 31ಭೂಮಾಲಕರು ರಸ್ತೆಯ ಮಧ್ಯ ಭಾಗದಿಂದ ತಲಾ 9ಮೀಟರ್ ಅಗಲೀಕರಣದ ಒಪ್ಪಿಗೆ ಸೂಚನೆ ನೀಡಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಭೂ ಮಾಲಕರಿಗೆ ಟಿಡಿಆರ್ ನ ಬಗ್ಗೆ ಮಾಹಿತಿ ನೀಡಿದರು.ನಗರಸಭಾ ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರಸಭಾ ಸದಸ್ಯ ಕೃಷ್ಣ ಕೊಡಂಚ, ರಮೇಶ್ ಕಾಂಚನ್,ವಿಜಯ ಪೂಜಾರಿ,ನಗರಸಭಾ ಪೌರಾಯುಕ್ತ ಕೆ.ಉದಯ ಶೆಟ್ಟಿ, ಕಾರ್ಯಪಾಲಕ ಅಭಿಯಂತರ ಮೋಹನರಾಜು , ಅಭಿಯಂತರ ದುರ್ಗಾ ಪ್ರಸಾದ್ , ತಾಲೂಕ ಸರ್ವೆಯರ್ ಪದ್ಮನಾಭ, ಗ್ರಾಮಲೆಕ್ಕಿಗ ಪುನೀತ್ ,ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply