ರಾಜೀವ ನಗರದಲ್ಲಿ ಚಿಣ್ಣರ ಕಮ್ಮಟ “ಕನ್ನಡ ನುಡಿ ಕಂದಾ ಚಿಲಿಪಿಲಿ ಶ್ರೀಗಂಧ”

ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರ ಉಡುಪಿ ವಲಯ ದಿನಾಂಕ 15 3 2024 ಶುಕ್ರವಾರ ಬೆಳಿಗ್ಗೆ ರಾಜೀವ ನಗರದಲ್ಲಿ ಪ್ರಾಥಮಿಕ ಶಾಲಾ ರಜತ ಸಂಭ್ರಮದ ಪ್ರಯುಕ್ತ, ಗ್ರಾಮೀಣ ಪರಿಸರದ ಅಂಗನವಾಡಿ ಮಕ್ಕಳಿಗೆ ಕನ್ನಡ ನುಡಿ ಕಂದಾ ಚಿಲಿಪಿಲಿ ಶ್ರೀಗಂಧಾ ಕಮ್ಮಟ ಜರಗಲಿದೆ.

ಉಡುಪಿ ಜಿಲ್ಲಾ ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಡಿಡಿಪಿಐ ಗಣಪತಿ ಕೆ ಕಮ್ಮಟವನ್ನು ಉದ್ಘಾಟಿಸಲಿರುವರು.

ಮುಖ್ಯ ಅತಿಥಿಗಳಾಗಿ, ಡಾ. ಯಲ್ಲಮ್ಮ, ಉಡುಪಿ ಕ್ಷೇತ್ರಶಿಕ್ಷಣಾಧಿಕಾರಿಗಳು, ಶ್ರೀ ಪ್ರಕಾಶ್ ಶೆಣೈ ಉದ್ಯಮಿಗಳು ಪರ್ಕಳ, ಗುರುಮೂರ್ತಿ ಉಪನ್ಯಾಸಕರು ಎಂಐಟಿ ಮಣಿಪಾಲ, ಶ್ರೀಮತಿ ಹರಿಣಾಕ್ಷಿ ದಿವಾಕರ ಶೆಟ್ಟಿ, ಶ್ರೀ ರವಿ.ಕೆ ಅಧ್ಯಕ್ಷರು ಎಸ್ ಡಿ ಎಂ ಸಿ, ಶ್ರೀಮತಿ ವಂದನಾ ರೈ ಸಂಪನ್ಮೂಲ ವ್ಯಕ್ತಿಗಳು ಕಾರ್ಕಳ, ಶ್ರೀ ಉಪೇಂದ್ರ ನಾಯಕ್ 80 ಬಡಗುಬೆಟ್ಟು ಭಾಗವಹಿಸಲಿರುವರು ಎಂದು ಶಾಲಾ ಮುಖ್ಯಸ್ಥರಾದ ಶ್ರೀ ಬಾಲಕೃಷ್ಣ ಪಿ ಮತ್ತು ಶ್ರೀಕೃಷ್ಣ ನಾಯ್ಕ ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply