ಬಿಲ್ಲಾಡಿ ಆತ್ಮಾನಂದ ಸರಸ್ವತಿ ಐಟಿಐ ಕಾಲೇಜಿಗೆ ಕಾನೂನು ಅರಿವು ಕಾರ್ಯಕ್ರಮ

ಉಡುಪಿ ಸಂವಿಧಾನ ದಿನಾಚರಣೆಯ ಪ್ರಯುಕ್ತ ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ವತಿಯಿಂದ ಆತ್ಮನಂದ ಸರಸ್ವತಿ ಐ ಟಿ ಐ ಕಾಲೇಜು ಬಿಲ್ಲಾಡಿ ಸಾಹಿಬ್ರಕಟ್ಟೆ ಯಲ್ಲಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮದ ಅಧ್ಯಕ್ಷೆಯನ್ನು
ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾಗಿರುವ ಅಡ್ವಕೇಟ್ ಪ್ರೀತಿ ತಂಗಪ್ಪನ್ ಕುಂದಾಪುರ ಮಾತನಾಡಿ ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಬಗ್ಗೆ ಸಂಪೂರ್ಣವಾಗಿ ತಿಳಿ ಹೇಳಿದರು . ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದಂತಹ ಉಡುಪಿ ಜಿಲ್ಲೆ
ವೃತ್ತ ನಿರೀಕ್ಷಕರು ಅಪರಾಧ ವಿಭಾಗ ( ಸೈಬರ್ ಕ್ರೈಂ ) ಶ್ರೀ ಮಂಜುನಾಥ ಸೈಬರ್ ಕ್ರೈಂ ಮತ್ತು ನಾರ್ಕೋಟಿಕ್ಸ್ (ಮಾದಕ ವ್ಯಸನ ವಿರೋಧದ ) ಬಗ್ಗೆ ಮಾಹಿತಿ ನೀಡಿದರು . ಸುಮಾರು 80ಗೆ ಹೆಚ್ಚಿನ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು .
ಎಚ್ ಆರ್ ಎಫ್ ಐ ಸದಸ್ಯರಾದ ಬಿ ಎನ್ ಯೂಸುಫ್ ವೇಧಿಕೆಯಲ್ಲಿ ಉಪಸ್ಥಿತರಿದ್ದರು۔
ಕಾಲೇಜಿನ ಪ್ರಾಂಶುಪಾಲರಾದ ರೂಪೇಶ್ ಗಣ್ಯರನ್ನು ಕಾಲೇಜಿನ ಪರವಾಗಿ ಸ್ವಾಗತಿಸಿದರು . ಎಚ್ ಆರ್ ಎಫ್ ಐ ಉಡುಪಿ ಜಿಲ್ಲೆಯ ಕಾರ್ಯದರ್ಶಿಯಾಗಿರುವ ಬಿ ಚಂದ್ರ ಅಮೀನ್ ಕಾರ್ಯಕ್ರಮವನ್ನು ನಿರೂಪಿಸಿದರು

 
 
 
 
 
 
 
 
 
 
 

Leave a Reply