‘ನೂರಾರು ಲೇಖಕರ ನೂರಾರು ಕಥೆಗಳು ಪುಸ್ತಕ ಲೋಕಾರ್ಪಣೆ ಸಮಾರಂಭ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಸಕ್ತ ಕಥೆಗಾರರಿಗೆ ಸಣ್ಣ ಕತೆಗಳನ್ನು ಬರೆದು ಕಳಿಸಲು ಆಹ್ವಾನಿಸಿತ್ತು.ಸುಮಾರು 400ಕ್ಕೂ ಹೆಚ್ಚು ಸಣ್ಣ ಕಥೆಗಳು ಬಂದಿದ್ದು, ಇದರಲ್ಲಿ ಮೊದಲ ಹಂತದಲ್ಲಿ117 ಕಥೆಗಳನ್ನು ಆಯ್ಕೆ ಮಾಡಲಾಗಿದೆ.

ಇದೀಗ ‘ನೂರಾರು ಲೇಖಕರ ನೂರಾರು ಕಥೆಗಳು’ ಎಂಬ ಕಥಾ ಸಂಕಲನ ನಾಡಿದ್ದು 8 ನೇ ತಾರೀಕು ಶನಿವಾರ ಸಂಜೆ 5:00 ಕ್ಕೆ ಸರಿಯಾಗಿ ಉಡುಪಿಯ ಪವನ್ ರೂಫ್ ಟಾಪ್ ಹೋಟೆಲ್ ಕಿದಿಯೂರಿನಲ್ಲಿ ಪ್ರಸಿದ್ಧ ಕಾದಂಬರಿಕಾರರು, ಸಾಹಿತಿಯಾದ ಜೋಗಿ ಅವರು ಬಿಡುಗಡೆಗೊಳಿಸಲಿದ್ದಾರೆ.ಪತ್ರಕರ್ತ ವಸಂತ ಗಿಳಿಯಾರು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೆಕ್ಕ ಪರಿಶೋಧಕರಾದ ಸುರೇಂದ್ರ ನಾಯಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಂಕರ್ ಹಾಗೂ ಸಭಾಧ್ಯಕ್ಷತೆಯನ್ನು ಸಂಸ್ಕೃತಿ ವಿಶ್ವ ಪ್ರತಿ ಷ್ಠಾನದ ಗೌರವಾಧ್ಯಕ್ಷರಾದ ವಿಶ್ವನಾಥ್ ಶೆಣಿೈ ವಹಿಸಲಿದು, ಸಭಾ ಕಾರ್ಯಕ್ರಮದ ಮೊದಲು ಕಿರು ಪ್ರಹಸನ ವಿರುತ್ತದೆ ಎಂದು ಸಂಚಾಲಕ ರವಿರಾಜ್ ಹೆ ತಿಳಿಸಿದೆ.

 
 
 
 
 
 
 
 
 
 
 

Leave a Reply