ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ  ಅಗಸ್ಟ್ 25ರ ಶುಕ್ರವಾರ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿವ್ರತ ಪೂಜೆ   

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಅಗಸ್ಟ್ 25ರ ಶುಕ್ರವಾರದಂದು ವರಮಹಾಲಕ್ಷ್ಮಿ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಅನ್ನ ಪ್ರಸಾದ ದೊಂದಿಗೆ  ನೆರವೇರಲಿದೆ.
 ಕ್ಷೇತ್ರದ ವಿಶೇಷ ಸಾನಿಧ್ಯವಾದ ಶ್ರೀ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ಸಂಪನ್ನಗೊಳ್ಳಲಿರುವ ಈ ಮಹಾನ್ ವ್ರತ ಪೂಜೆಯು 
 ಸಂಜೆ ಗಂಟೆ 5 ರಿಂದ ಆರಂಭಗೊಳ್ಳಲಿದೆ. ರಾತ್ರಿಯ ಮಹಾಪೂಜೆಯಲ್ಲಿ ವಿಶೇಷ ಸೋಣರತಿ ಸೇವೆ ನಡೆಯಲಿದೆ.
 ಈ ಪೂಜೆಯು ಸಾಮೂಹಿಕವಾಗಿ ಭಕ್ತರ ಕೊಡುವಿಕೆಯೊಂದಿಗೆ ನೆರವೇರಲಿರುವುದರಿಂದ ಆಸಕ್ತ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳಬಹುದು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.
 
 
 
 
 
 
 
 
 
 
 

Leave a Reply