ನ್ಯೂಮೀಡಿಯಾ ಮತ್ತು ನೆಟ್‌ವರ್ಕ್ ಸೊಸೈಟಿಯ ಆಗಮನ ‘ಡೆವಲಪ್ಮೆಂಟ್ ಕಮ್ಯುನಿಕೇಷನ್’ನ ಪಥವನ್ನೇ ಬದಲಾಯಿಸಿದೆ.~ ಪ್ರೊ.ಬಿ.ಪಿ.ಸಂಜಯ್

ನ್ಯೂಮೀಡಿಯಾ ಮತ್ತು ನೆಟ್‌ವರ್ಕ್ ಸೊಸೈಟಿಯ ಆಗಮನ ‘ಡೆವಲಪ್ಮೆಂಟ್ ಕಮ್ಯುನಿಕೇಷನ್’ನ ಪಥವನ್ನೇ ಬದಲಾಯಿಸಿದೆ. ನ್ಯೂಮೀಡಿಯಾವು ನೆಟ್‌ವರ್ಕ್ ಸೊಸೈಟಿಯ ಬೆಳವಣಿಗೆಯನ್ನು ಸುಗಮಗೊಳಿಸಿ ‘ಅಭಿವೃದ್ಧಿ’ ಕುರಿತ ಚರ್ಚೆಯ ಮೇಲೆ ಪರಿಣಾಮ ಬೀರಿದೆ ಎಂದು ತಮಿಳುನಾಡಿನ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಪ್ರೊ.ಬಿ.ಪಿ.ಸಂಜಯ್ ಹೇಳಿದರು.

ಇವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ ಅಂಡ್ ಸೈನ್ಸಸ್‌ನಲ್ಲಿ ‘ಡೆವಲಪ್ಮೆಂಟ್ ಕಮ್ಯುನಿಕೇಷನ್’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಪ್ರೊ.ಸಂಜಯ್, ಡೆವಲಪ್ಮೆಂಟ್ ಕಮ್ಯುನಿಕೇಷನ್ ಕುರಿತ ಚರ್ಚೆ ವಸಾಹತುಶಾಹಿ, ರಾಷ್ಟ್ರೀಯತೆ ಮತ್ತು ಸಮೂಹ ಮಾಧ್ಯಮಗಳ ಅಶ್ರಗದ ಮೂಲಕ ಹಾದುಹೋಗಿದೆ ಮತ್ತು ಪ್ರಸ್ತುತ ನೆಟ್‌ವರ್ಕ್ ಸೊಸೈಟಿಯ ಯುಗದಲ್ಲಿ ಇದು ಬಹುಅಭಿಪ್ರಾಯಗಳನ್ನು ಪ್ರೋತ್ಸಾಹಿಸಿದೆ. “ಅಭಿವೃದ್ಧಿಯ ಬಗ್ಗೆ ಅನೇಕ ದೃಷ್ಟಿಕೋನಗಳಿವೆ, ಮತ್ತು ‘ಸುಸ್ಥಿರ ಅಭಿವೃದ್ಧಿ’ ಎಂಬ ಕಲ್ಪನೆಯುಈಗ ಮಹತ್ವವನ್ನು ಪಡೆದುಕೊಂಡಿದೆ.” ಎಂದರು.

ಗಾಂಧಿ, ಬೌದ್ಧ ಮತ್ತು ಇಸ್ಲಾಮಿಕ್ ಮಾದರಿಗಳಂತಹ ಅಭಿವೃದ್ಧಿಯ ಇತರ ಮಾದರಿಗಳು ಇದ್ದು, “ಸಮಾಜವಾದಿ ದೃಷ್ಟಿಕೋನದೊಂದಿಗೆ ಬಂಡವಾಳಶಾಹಿ ಸಂತೋಷವನ್ನು” ಹುಡುಕುವುದು ಚರ್ಚೆಯ ಪ್ರಮುಖ ಅಂಶವಾಗಿದೆ. ಎಂದರು.

ಅಭಿವೃದ್ಧಿಯ ಫಲಗಳು ಎಲ್ಲರಿಗೂ ಸಮಾನವಾಗಿ ತಲುಪಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಪ್ರೊ.ಸಂಜಯ್, ‘ಸಮಾನತೆಯೊಂದಿಗೆ ಬೆಳವಣಿಗೆ’ ಸಾಧಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಇದೇ ವೇಳೆ, ಸಮಾಜಕ್ಕೆ ಚಿಂತಕರು ಅಗತ್ಯವಿಲ್ಲ ಎಂದು ಪ್ರಬಲ ಸಿದ್ಧಾಂತಗಳು ಭಾವಿಸಿರುವುದರಿಂದ ಲಿಬರಲ್ ಆರ್ಟ್ಸ್ ಮತ್ತು ಹ್ಯುಮ್ಯಾನಿಟೀಸ್ ನ ಅಧ್ಯಯನವನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. .

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ ಅಭಿವೃದ್ಧಿಯ ಪರ್ಯಾಯ ಮಾದರಿಗಳ ಅಗತ್ಯವನ್ನು ಒತ್ತಿ ಹೇಳಿದರು. ನಮ್ಮ ಎಲ್ಲಾ ಚರ್ಚೆಗಳಲ್ಲಿ ಮೂಲಭೂತ ಮಾನವ ಅಭಿವೃದ್ಧಿ ಸೂಚ್ಯಂಕಗಳಿಗೆ ಒತ್ತು ನೀಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಪ್ರೊ.ಮುರಳೀಧರ ಉಪಾಧ್ಯಾಯ, ಲೇಖಕಿ ಜ್ಯೋತಿ ಮಹದೇವ್, ಪರಿಸರ ತಜ್ಞ ಡಾ.ಶ್ರೀಕುಮಾರ್ ಮತ್ತಿತರರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply