ಕಟಪಾಡಿಯ ಯಶಸ್ ಪ್ರಕಾಶನ ಸಂಸ್ಥೆಯ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತುಳು ಕವಿತೆ ರಚನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಹೆತ್ತ ತಂದೆ ತಾಯಿಯ ಬಗ್ಗೆ ”ಅಪ್ಪೆಮ್ಮೆ” ಶೀರ್ಷಿಕೆ ಯೊಂದಿಗೆ ತುಳು ಭಾಷೆಯಲ್ಲಿ ನೂರು ಪದಗಳನ್ನು ಮೀರದಂತೆ ಕವಿತೆಯನ್ನು ರಚಿಸಬೇಕು. ಸ್ವರಚಿತ ಕವಿತೆಗಳನ್ನು ಆಗಸ್ಟ್ 10 ರೊಳಗೆ ಈ ಮೊಬೈಲ್ ನಂಬರಿಗೆ 9964019229 ವಾಟ್ಸಾಪ್ ಮೂಲಕ ಕಳುಹಿಸಿಕೊಡಬೇಕು. A4 ಹಾಳೆಯಲ್ಲಿ ಕವಿತೆಯನ್ನು ಸ್ವಂತ ಕೈ ಬರಹದಲ್ಲಿ ನೀಟಾಗಿ ಬರೆದು ಹೆಸರು, ಶಾಲೆಯ ಹೆಸರು ಹಾಗೂ ತರಗತಿಯನ್ನು ನಮೂದಿಸಿ ಕೂಡಲೇ ಕಳುಹಿಸಿಕೊಡಿ. ಆಯ್ಕೆಯಾದ ಕವಿತೆಗಳಿಗೆ ಆಕರ್ಷಕ ಬಹುಮಾನದೊಂದಿಗೆ ಪ್ರಶಂಸಾಪತ್ರಗಳನ್ನು ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.