ಸಂಸ್ಥೆಯ ಉತ್ತಮ ಕಾರ್ಯಶೀಲತೆಗಾಗಿ ತಂತ್ರಜ್ಞಾನದ  ಬಳಕೆ ಅವಶ್ಯ: ಶ್ರೀಧರ ಮೊಯ್ಲಿ

ಕರ್ನಾಟಕ ರಾಜ್ಯ ದೇವಾಡಿಗರ ಸಂಘ, ಮಂಗಳೂರು ಇದರ ಅಧ್ಯಕ್ಷರಾದ ಶ್ರೀಧರ ಮೊಯ್ಲಿ ಇವರು ಹಿರಿಯಡಕ ಉಪಸಂಘದ ಕಂಪ್ಯೂಟರ್ ವಿಭಾಗವನ್ನು ಸೋಮವಾರ 23 ಅಕ್ಟೋಬರ್ 2023 ರಂದು ಉದ್ಘಾಟಿಸುತ್ತಾ ಸಂಸ್ಥೆಯ ಉತ್ತಮ ಕಾರ್ಯಶೀಲತೆಗಾಗಿ ತಂತ್ರಜ್ಞಾನದ ಬಳಕೆ ಅವಶ್ಯ, ನೂತನ ಕಾರ್ಯಕಾರಿ ಸಮಿತಿಯ ಈ ಹೊಸ ಹೆಜ್ಜೆ ಅಭಿನಂದನೀಯ ಎಂದು ಹೇಳಿದರು.
ಉದ್ಘಾಟನಾ ಸಮಾರಂಭವು ಹಿರಿಯಡಕ ಉಪಸಂಘದ ಅಧ್ಯಕ್ಷರಾದ ಎಚ್ ರಾಜೇಂದ್ರ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೆಲ್ಕಂಗ್ರೂಪ್ ಗ್ರ್ಯಾಜುಯೆಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್, ಮಾಹೆ, ಮಣಿಪಾಲ ಇದರ ಪ್ರಾಧ್ಯಾಪಕ ರಾಘವೇಂದ್ರ ಜಿ ಇವರು ಸೇವಾ ಸಂಸ್ಥೆಗಳು ದಿನನಿತ್ಯ ವ್ಯವಹಾರ ಮತ್ತು ಸಂವಹನಕ್ಕಾಗಿ ಹೇಗೆ ಕಂಪ್ಯೂಟರ್ ನ ಸದ್ಬಳಕೆ ಪಡೆಯಬಹುದು ಎಂಬುದನ್ನು ವಿವರಿಸಿದರು.

ಎಚ್ ರಾಜೇಂದ್ರ ಕುಮಾರ್ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಂಪ್ಯೂಟರ್ ಒದಗಿಸಿಕೊಟ್ಟ ದಾನಿ ಮಹನೀಯರಿಗೆ ಅಭಿನಂದಿಸಿದರು ಹಾಗು ತಮ್ಮ ಅವಧಿಯಲ್ಲಿ ಸಮಾಜದ ಅಭಿವೃದ್ದಿ ಹಾಗು ಸಂಘಟನೆಯ ನಿಟ್ಟಿನಲ್ಲಿ ದುಡಿಯುವುದಾಗಿ ಭರವಸೆ ನೀಡಿದರು. ವೇದಿಕೆಯಲ್ಲಿ ಸಮಾಜದ ಹಿರಿಯರಾದ ನಾಗಪ್ಪ ಶೇರಿಗಾರ್ ಉಪಸ್ಥಿತರಿದ್ದರು.

ಸಾಕಷ್ಟು ಸದಸ್ಯರು ಹಾಗು ಸಮಾಜಭಾಂದವರು ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಸಂಘದ ಲೆಕ್ಕ ಪರಿಶೋಧಕರಾದ ಎಚ್ ಗಣೇಶ್ ಪ್ರಸ್ತಾವಿಸಿ, ಜ್ಯೋತಿ ಕುಮಾರ ದೇವಾಡಿಗ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಮನ್ಮಥ ದೇವಾಡಿಗ ವಂದಿಸಿ, ಕುಮಾರಿ ರಚನಾ ಪ್ರಾರ್ಥನೆ ಹಾಡಿದರು, ಕಾರ್ಯ ಕ್ರಮವನ್ನು ಕುಮಾರಿ ಶತ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply