18 ಪೇಟೆಯ ಜಿ. ಎಸ್. ಬಿ. ಸಮಾಜ ಭಾಂದವರ ಅಪೂರ್ವ ಸಮ್ಮಿಲನ ಕಾರ್ಯಕ್ರಮ

ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾ ದಶಮಾನೋತ್ಸವದ ಪೂರ್ವಭಾವಿಯಾಗಿ 18 ಪೇಟೆಯ ಜಿ. ಎಸ್. ಬಿ. ಸಮಾಜ ಭಾಂದವರ ಅಪೂರ್ವ ಸಮ್ಮಿಲನ ಕಾರ್ಯಕ್ರಮವು ಡಿ.17 ರಂದು ಬೆಳಗ್ಗೆ 9.30 ರಿಂದ ದೇವಸ್ಥಾನದ ಸುಕೃತೀಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಈ ಪ್ರಯುಕ್ತ ಬೆಳಿಗ್ಗೆ 9.15 ಕ್ಕೆ ದೇವತಾ ಪ್ರಾರ್ಥನೆ ನಂತರ ಶ್ರೀ ಗುರುವರ್ಯರ ಭಾವಚಿತ್ರದೊಂದಿಗೆ ಸರ್ವ ಗಣ್ಯರೊಂದಿಗೆ ಮೆರವಣೆಗೆಯಲ್ಲಿ ಸಭಾಗ್ರಹ ಪ್ರವೇಶ ನಡೆಯಲಿದೆ. ಅನಂತರ ಕಸ್ತೂರ್ಬಾ ಆಸ್ಪತ್ರೆ ಯ ರಕ್ತ ನಿಧಿ ವಿಭಾಗ ದ ಸಹಯೋಗದಲ್ಲಿ ರಕ್ತದಾನ ಶಿಭಿರ ಹಾಗೂ ಯಾದವೇ0ದ್ರ ಆಯುರ್ವೇದ ಕ್ಲಿನಿಕ್ ಕೋಟೇಶ್ವರ ಇವರ ಸಹಯೋಗದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರವನ್ನು ಸಾರ್ವಜನಿಕರಿಗೆ ಹಮ್ಮಿಕೊಳ್ಳಲಾಗಿದೆ.

ಸಭಾ ಕಾರ್ಯಕ್ರಮದಲ್ಲಿ ಸಮಾಜದ ಸಾಧಕರಿಗೆ ಸಮ್ಮಾನ, ಗೌರವಾರ್ಪಣೆ ತದನಂತರ ಭೋಜನ ಪ್ರಸಾಧ ವಿತರಣೆ ನಡೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ .

 
 
 
 
 
 
 
 
 
 
 

Leave a Reply