ರಾಮಕ್ಷತ್ರಿಯ ಸಂಘ (ರಿ.) ಉಡುಪಿ, ಯುವಸಂಘ ಮತ್ತು ಮಹಿಳಾ ಮಂಡಲಗಳ ೪೧ನೇ ವಾರ್ಷಿಕ ಮಹಾಸಭೆಯು ಆದಿತ್ಯವಾರ ಸಂಘದ ಸಭಾಭವನ ಉಪ್ಪೂರಿನಲ್ಲಿ ನಡೆಸಲಾಯಿತು. ಸಂಘದ ಅಧ್ಯಕ್ಷ ಕೆ.ಟಿ. ನಾಯ್ಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಘದ ಗೌರವಾಧ್ಯಕ್ಷರಾದ ಶ್ರೀ ಕೆ. ರವಿರಾಜ್ ಇವರು ಉದ್ಘಾಟಿಸಿ ಮಾತನಾಡುತ್ತಾ ಸಂಘದ ಬೆಳವಣಿಗೆಯಲ್ಲಿ ಯುವಕರ ಪಾತ್ರ ಅತ್ಯಂತ ಪ್ರಮುಖವಾದದ್ದು, ಸಂಘದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನ ಸಹಕಾರ ನೀಡಬೇಕೆಂದು ಶುಭ ನುಡಿದರು.ಕೋಶಾಧಿಕಾರಿಗಳಾದ ಜಯಂತ್ ಕುಮಾರ್, ರಾಮದಾಸ್ ಪಿ. ಮತ್ತು ಚಂಚಲಾಕ್ಷಿ ವಾರ್ಷಿಕ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕರುಣಾಕರ್, ಟ್ರಸ್ಟ್ ಅಧ್ಯಕ್ಷರು, ಕೃಷ್ಣ ನೀಲಾವರ ಅಧ್ಯಕ್ಷರು ಯುವಸಂಘ, ಮಂಜುಲಾ ಜಯಕರ್ ಅಧ್ಯಕ್ಷರು ಮಹಿಳಾ ಮಂಡಲ ಇವರುಗಳು ಮಾತನಾಡುತ್ತಾ ಸಹಕಾರನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಾ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪ್ರವೀಣ್ ಕುಮಾರ್ ಗುರ್ಮೆ ಅಧ್ಯಕ್ಷರು ರಾಮಾಂಜನೇಯ ಸಭಾಭವನ ನಿರ್ಮಾಣ ಸಮಿತಿ ಇವರುಮಾತನಾಡುತ್ತಾ ಸಭಾಭವನದ ಶೀಘ್ರ ಉದ್ಘಾಟನೆಗೆ ಸಮಾಜ ಬಾಂಧವರು ತಮ್ಮಿಂದಾದ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಪ್ರಶಸ್ತಿ ಪುರಸ್ಕೃತರಾದ ಮತ್ತು ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಸಮಾಜದ ಗೌರವಾನ್ವಿತರಾದ ಪ್ರವೀಣ್ ಕುಮಾರ್ ಗುರ್ಮೆ, ಕರುಣಾಕರ ರಾವ್, ದೇವದಾಸ್ ಉಪ್ಪೂರು, ಆನಂದ ಸೇರ್ವೆಗಾರ್, ಬಾಲಕೃಷ್ಣ ಮದ್ದೋಡಿ, ಶ್ರೀಧರ್ ಸಾಸ್ತಾನ, ಶಿವಾನಂದ ನಾಯ್ಕ್ ಇಂದ್ರಾಳಿ, ಹೂವಯ್ಯ ಸೇರ್ವೆಗಾರ್ ಇವರುಗಳನ್ನು ಸನ್ಮಾನಿಸಲಾಯಿತು.
ಮಾಜಿ ಅಧ್ಯಕ್ಷ ಶ್ರೀ ಪರಮೇಶ್ವರ ಮದ್ದೋಡಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಶ್ರೀ ಜಯಪ್ರಕಾಶ್ ತೆಂಕಬೆಟ್ಟು, ಶ್ರೀ ಜಯಕರ್ ಉಪ್ಪೂರು ಮತ್ತು ಶ್ರೀಮತಿ ವಿಜಯಲಕ್ಶ್ಮೀ ಮಾಧವ್ ವಾರ್ಷಿಕ ವರದಿಯನ್ನು ತಿಳಿಸಿದರು. ಜಲಪುಷ್ಪ ಪ್ರಾರ್ಥಸಿದರು. ಬಾಲಗಂಗಾಧರ ರಾವ್ ಕೆ. ತಿಳುವಳಿಕೆ ಪತ್ರ ವಾಚಿಸಿದರು. ಶೋಭಾ ಜಯಪ್ರಕಾಶ್ನಿರೂಪಿಸಿದರು. ಜೊತೆ ಕಾರ್ಯದರ್ಶಿ ಜಯಪ್ರಕಾಶ್ ಕುಮಾರ್ ಧನ್ಯವಾದವಿತ್ತರು.