ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೆಮುಂಡೇಲು, ಶ್ರೀ ಪಾಂಡುರಂಗ ಭಜನಾ ಮಂಡಳಿ ಕೆಮುಂಡೇಲು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮುದರಂಗಡಿ ಹಾಗೂ ಜನ್ಮಭೂಮಿ ಗೌರವಾಭಿವಂದನ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಐತಿಹಾಸಿಕ ಮಹತ್ವದ ಪುರಾತನ ಗುರುಮಠ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಜನ್ಮ ಭೂಮಿ ಮಠದಲ್ಲಿ ದಿನಾಂಕ 11.01.2024, ಗುರುವಾರ ಗಂಟೆ 9.00ಕ್ಕೆ ಗೌರವಾಭಿವಂದನ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ ಗಂಟೆ 8:30ಕ್ಕೆ ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ಶ್ರೀ ಪಾಂಡುರಂಗ ದೇವರಿಗೆ ಮಂಗಳಾರತಿ, ಮುಂಡೇಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಹಾಗೂ ನೂತನ ಶಾಲಾ ಕಟ್ಟಡ ಉದ್ಘಾಟನೆ, ಬೆಳಿಗ್ಗೆ 9:00ಕ್ಕೆ ಮಾಣಿಯೂರು ಮಠದಲ್ಲಿ ಗುರುಗಳಿಗೆ ಕಾರ್ಯಕ್ರಮ ಸಂಯೋಜನೆಯ ಸಂಘಟನೆಗಳಿಂದ ಪಾದಾಭಿವಂದನೆ ನಡೆಯಲಿದೆ.
ಪುತ್ತಿಗೆ ಮಠದ ಕಿರಿಯಪಟ್ಟ ಶ್ರೀಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಎಲ್ಲಾ ಕಾರ್ಯ ಕ್ರಮಗಳು ಸಂಪನ್ನಗೊಳ್ಳಲಿದೆ.