ಶ್ರೀ ಶಾಂತಿಮತೀ ಪ್ರತಿಷ್ಠಾನದ ದಶಮಾನೋತ್ಸವದ ಲೋಗೋ ಅನಾವರಣ 

ಶ್ರೀ ಶಾಂತಿಮತೀ ಪ್ರತಿಷ್ಠಾನದ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ‘ ಲೋಗೋ ಅನಾವರಣ ‘ ಕಾರ್ಯಕ್ರಮ ಕೋಟ ಮಾಂಗಲ್ಯ ಮಂದಿರದಲ್ಲಿ 8-1-2023 ನೇ ಭಾನುವಾರ ನಡೆಯಿತು.
ಕೋಟ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಗಣೇಶ ಭಟ್ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯರಾದ ಶಿವರಾಮ ಉಡುಪರು ಜಂಟಿಯಾಗಿ ಲೋಗೋ ಅನಾವರಣಗೊಳಿಸಿದರು. 
ಶಾಂತಿಮತೀ ಪ್ರತಿಷ್ಠಾನ ದ ಅಧ್ಯಕ್ಷರಾದ ಸಚ್ಚಿದಾನಂದ ಅಡಿಗ ವಡ್ಡರ್ಸೆ ಹಾಗೂ ಡಾ. ವಿಜಯ್ ಕುಮಾರ್ ಮಂಜರ್ ಉಪಸ್ಥಿತರಿದ್ದರು. ಲೋಗೋವನ್ನು ಅಂದವಾಗಿ ತಯಾರಿಸಿದ ಪ್ರಮೋದ್ ವಾರಂಬಳ್ಳಿ ಅವರನ್ನು ಗೌರವಿಸಲಾಯಿತು.
 
 
 
 
 
 
 
 
 
 
 

Leave a Reply