ವರ ಮಹಾಲಕ್ಷ್ಮೀ ವ್ರತದ ಮಹತ್ವದ ಬಗ್ಗೆ ಶಿವರಾಜ ಉಪಾಧ್ಯರಿಂದ ಪ್ರವಚನ ನಡೆಯಿತು. ಸಮಾಜದ ನೂರಾರು ಮಹಿಳೆಯರು ಲಕ್ಷ್ಮೀ ಶೋಭಾನೆ ಹಾಗು ಭಜನಾ ಸಂಕೀರ್ತನೆಯೊಂದಿಗೆ ಈ ವೃತದಲ್ಲಿ ಪಾಲ್ಗೊಂಡು ಮಹಾಲಕ್ಷ್ಮಿ ದೇವಿಯನ್ನು ಪುಷ್ಪಾರ್ಚನೆಯೊಂದಿಗೆ ಆರಾಧಿಸಿ ಪ್ರಸಾದ ಸ್ವೀಕರಿಸಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯರಿಗಾಗಿ “ಅತ್ಯುತ್ತಮ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆ” ಎಂಬ ಸ್ಪರ್ಧೆ ನಡೆಯಿತು ಮತ್ತು ವಿಜೇತರಾದ ಶ್ರೀಮತಿ ರಮಾ ಎಲ್ ಭಟ್, ವಿಜಯಾ ದಿನೇಶ್, ಪೂರ್ಣಿಮಾ ಜನಾರ್ದನ್, ದೀಪಾ ರಾಮಕೃಷ್ಣ, ಪವಿತ್ರ ಸಾಮಗ ಹಾಗೂ ಕೌಸ್ತುಭ ಚಂದನ್ ರವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ, ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣ ಬಲ್ಲಾಳ್ ಮತ್ತು ರಜತೋತ್ಸವ ಸಮಿತಿಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು