ಅಗಲ್ಪಾಡಿ: ವಿಪಂಚಿ ಬಳಗದ ಪಂಚವೀಣಾ ಕಾರ್ಯಕ್ರಮ.

ಕಾಸರಗೋಡಿನ ಅಗಲ್ಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸಹಸ್ರ ಚಂಡಿಕಾಯಾಗದ ಕಾರ್ಯಕ್ರಮದ ಐದನೇಯ ದಿನದಲ್ಲಿ ಬಹಳ ವಿಶೇಷವಾಗಿ ವೀಣಾ ವಿನೋದಿನಿ ವಿದುಷಿ ಪವನ ಬಿ ಆಚಾರ್ ಅವರ ನೇತೃತ್ವದಲ್ಲಿ ಮಣಿಪಾಲದ ವಿಪಂಚಿ ಬಳಗದವರಿಂದ ಪಂಚವೀಣಾ ಕಾರ್ಯಕ್ರಮ ಜರಗಿತು.

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಅಷ್ಟೋತ್ತರ ಶತ ಕಲಶಾಭಿಷೇಕ . ಅಷ್ಟೋತ್ತರ ಸಹಸ್ರ ನಾರಿಕೇಳ ಗಣಪತಿ ಯಾಗ, ಋಕ್ ಸಂಹಿತ ಯಾಗ, ಐಕ ಮತ್ಯ ಹೋಮ,  ರುದ್ರ ಹೋಮ, ಧನ್ವಂತರಿ ಹೋಮ ನಡೆಯುವ ಪುಣ್ಯ ಸಮಾರಂಭ ದಲ್ಲಿ ಅಷ್ಟಾವಧಾನದಲ್ಲಿ ಹಾಗೂ ತದನಂತರ ದೇವಳದ ಸರಸ್ವತೀವೇದಿಕೆಯಲ್ಲಿ ನಡೆದ ವೀಣಾ ವಾದನ ಕಚೇರಿ ಋತ್ವಿಜರ ಹಾಗೂ ಭಕ್ತಾದಿಗಳ ಮನ್ನಣೆ ಗಳಿಸಿತು.

ವೀಣಾ ವಾದನದಲ್ಲಿ ಜಯಲಕ್ಷ್ಮೀ ಸಾಣೂರು. ಶಿಲ್ಪಾ ಜೋಶಿ. ಕೌಸ್ತುಭ ರಾವ್. ಸಮನ್ವಿ ಮಯ್ಯ ಪಾಲ್ಗೊಂಡಿದ್ದು ಮೃದಂಗದಲ್ಲಿ ಬಾಲಚಂದ್ರ ಭಾಗವತ್ ಹಾಗೂ ತಾಳದಲ್ಲಿ ಧೃತಿ ರಾವ್. ಹಾಗೂ ಪ್ರಸಾದ್ ರಾವ್ ಅವರು ಇತರ ಸಹಕಾರ ನೀಡಿದರು.

 
 
 
 
 
 
 
 
 
 
 

Leave a Reply