ಕೋಟೆರಾಯೇಶ್ವರ ಕ್ಷೇತ್ರ ಮಹಾತ್ಮೆ ಪ್ರಸಂಗ ಲೋಕಾರ್ಪಣೆ

ಅಮಾಸೆಬೈಲು: ಇಲ್ಲಿಗೆ ಸಮೀಪದ ಬಳ್ಮನೆಯ ಕೋಟೆರಾಯೇಶ್ವರ ಕ್ಷೇತ್ರದಲ್ಲಿ ಕೋಟೆರಾಯೇಶ್ವರ ಕ್ಷೇತ್ರ ಮಹಾತ್ಮೆ ಪ್ರಸಂಗದ ಲೋಕಾರ್ಪಣೆ ಇತ್ತೀಚೆಗೆ ನಡೆಯಿತು. ಶ್ರೀ ಕೆ.ಬಸವರಾಜ್ ರಚಿಸಿದ ಈ ಪ್ರಸಂಗವನ್ನು ಮಡಾಮಕ್ಕಿ ಮೇಳದ ರಂಗಸ್ಥಳದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಡಾ.ಶ್ರೀಕಾಂತ್ ಸಿದ್ದಾಪುರ ಪ್ರಸಂಗ ರಚನೆಗೆ ಛಂದಸ್ಸು, ಸಾಹಿತ್ಯ ಹಾಗೂ ರಂಗನಡೆಯ ಕಲ್ಪನೆ ಇರಬೇಕು ಎಂದರು.

 

ಮುಖ್ಯ ಅತಿಥಿಗಳಾಗಿ ಮಡಾಮಕ್ಕಿ ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ಶೆಟ್ಟಿ, ಶ್ರೀ ಕ್ಷೇತ್ರ ರಟ್ಟಾಡಿಯ ಮೊಕ್ತೇಸರ ನವೀನ್ ಚಂದ್ರ ಶೆಟ್ಟಿ, ಜನ್ನಾಡಿ ಫೇವರಿಟ್ ಕ್ಯಾಶ್ಯೂನ ಶಂಕರ್ ಹೆಗ್ಡೆ ಶುಭ ಕೋರಿದರು. ಜ್ಯೋತಿಷ್ಯ ರತ್ನ ಡಾ. ಅಭಿಷೇಕ್ ಬಾಯರಿ ಅಧ್ಯಕ್ಷತೆ ವಹಿಸಿದ್ದರು.

 

ಪ್ರಸಂಗಕರ್ತ ಶ್ರೀ ಬಸವರಾಜ್ ಶೆಟ್ಟಿಗಾರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀ ಅಮರೇಶ್ ಹೆಗ್ಡೆ ಪ್ರಸ್ತಾವಿಕ ಮಾತುಗಳನ್ನಾಡಿದರು. ವನಿತಾ ಅಮರೇಶ್ ವಂದಿಸಿದರು. ಶ್ರೀ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply