ದಿ.ಶಂಕರ್ ಬಿ ತೋಕೋಳಿ ಬೆಳ್ಳೆಗೆ ಶಾಲಾ ಹಳೆ ವಿಧ್ಯಾರ್ಥಿಗಳ ಪರವಾಗಿ ಶ್ರದ್ಧಾಂಜಲಿ

ಕಾಪು: ಇತ್ತೀಚೆಗೆ ನಿಧನರಾದ ಕಾಪು ಮಜೂರು ಕರಂದಾಡಿ ಶಾಲೆಯ ಮುಖ್ಯ ಶಿಕ್ಷಕ ದಿ.ಶಂಕರ್ ಬಿ ತೋಕೋಳಿ ಬೆಳ್ಳೆ ಇವರಿಗೆ ಶಾಲಾ ಆಡಳಿತ ಮಂಡಳಿ, ಮಕ್ಕಳ ಹೆತ್ತವರು ಮತ್ತು ಶಾಲಾ ಹಳೆ ವಿಧ್ಯಾರ್ಥಿಗಳ ಪರವಾಗಿ ಭಾವಪೂರ್ಣ ಶ್ರಧ್ದಾಂಜಲಿ ಅರ್ಪಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ನಿವೃತ್ತ ಶಿಕ್ಷಕ ರಾಧಾಕೃಷ್ಣ ಪ್ರಭು, ಮಜೂರು ಪಂಚಾಯತ್ ಅಧ್ಯಕ್ಷೆ ಶರ್ಮಿಳಾ ಜಗದೀಶ್ ಆಚಾರ್ಯ, ಶಾಲಾ ನಿವೃತ್ತ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸಮಾಜರತ್ನ ಲೀಲಾಧರ ಶೆಟ್ಟಿ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಪದ್ಮನಾಭ ಶಾನುಭೋಗ್, ರವಿರಾಜ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಕಲ್ಲೂರಾಯ ಸ್ವಾಗತಿಸಿದರು. ಶಾಲಾ ಶಿಕ್ಷಕಿ ಸತ್ಯವತಿ ಕಾರ್ಯಕ್ರಮ ನಿರೂಪಿಸಿ ನಿವೃತ್ತ ಶಿಕ್ಷಕ ಶಶಿಶೇಖರ್ ಭಟ್ ವಂದಿಸಿದರು.

 
 
 
 
 
 
 
 
 
 
 

Leave a Reply