ಮುದ್ದು ಕೃಷ್ಣ ಸ್ಪರ್ಧೆ

ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಸಾಯಿ ಈಶ್ವರ್ ಟಿವಿ ಸಹಯೋಗದಲ್ಲಿ ಮುದ್ದು ಕೃಷ್ಣ ಸ್ಪರ್ಧೆ ಉಡುಪಿಯಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ 1 ರಿಂದ 3 ವರ್ಷ, 3 ವರ್ಷದಿಂದ 6 ವರ್ಷದ 60 ಕ್ಕಿಂತಲೂ ಅಧಿಕ ಪುಟಾಣಿಗಳು ಕೃಷ್ಣನ ಬಾಲ್ಯದ ವಿನೋದಾವಳಿಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು.

    ಶಂಕರಪುರ ದ್ವಾರಕಾಮಾಯಿ ಮಠದ ಸಾಯಿ ಈಶ್ವರ್ ಸ್ವಾಮೀಜಿ ಕಾರ್ಯಕ್ರಮವನ್ನು ಮಡಕೆ ಒಡೆಯುವ ಮೂಲಕ ಉದ್ಘಾಟಿಸಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಿದರು.

ಕಾರ್ಯಕ್ರಮದಲ್ಲಿ ಮಲಬಾರ್ ಗೋಲ್ದ್ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್, ಸಾಯಿ ಈಶ್ವರ್ ಟಿವಿ ಮುಖ್ಯಸ್ಥರಾದ ಪ್ರಸಾದ್ ಸುವರ್ಣ, ಸತೀಶ್ ದೇವಾಡಿಗ ತೀರ್ಪುಗಾರರಾಗಿ ವಿದುಷಿ ಶ್ರುತಿ ಭಟ್, ಪ್ರವೀಣ್ ಆಚಾರ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಾಂಭವಿ  ಆಚಾರ್ಯ ನಿರೂಪಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply