ಕೋಡಿ ಕನ್ಯಾಣ- ಶ್ರೀ ರಾಮ ದೇಗುಲ ಪುನರ್ ಪ್ರತಿಷ್ಠಾ ಮಹೋತ್ಸವ

ಕೋಟ: ಶ್ರೀ ರಾಮ ದೇಗುಲ ಕೋಡಿ ಕನ್ಯಾಣ ಇದರ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ರಜತಕವಚ ಸಮರ್ಪಣೆ ಮತ್ತು 28ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಫೆ. 13 ರಂದು ಜರಗಿತು.
ಶ್ರೀ ರಾಮ ಸೀತೆ ಲಕ್ಷ್ಮಣ  ಹನುಮಂತ ಸಮೇತ ಶ್ರೀರಾಮನ ವಿಗ್ರಹ ಪುರ ಮೆರವಣಿಗೆ ಕನ್ಯಾಣ ಸೋಮನಾಥ ದೇವಸ್ಥಾನದಿಂದ ಕೋಡಿ ಶ್ರೀರಾಮ ದೇಗುಲಕ್ಕೆ ಮೆರವಣಿಗೆ ಮುಖಾಂತರ ವೈಭವಪೂರಿತ ರೀತಿಯಲ್ಲಿ ಶ್ರೀಮಂದಿರದಲ್ಲಿ ಕರೆತರಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿಧಗಳು ಭಜನಾ ತಂಡಗಳು ಶ್ರೀರಾಮ ನಾಮಸ್ಮರಣೆಯೊಂದಿಗೆ ಚಂದಗಾಣಿಸಿದರು. ಮೆರವಣಿಗೆಯಲ್ಲಿ ಉದ್ಯಮಿ ಶಿವ ಎಸ್ ಕರ್ಕೇರ ಸಹಿತ ಮಂದಿರ ಆಡಳಿತಮಂಡಳಿ,ಗ್ರಾಮಸ್ಥರು ಮತ್ತಿತರರು ಭಾಗವಹಿಸಿದರು. ಮೆರವಣಿಗೆಯ ತರುವಾಯ ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಮತ್ತು ತಂಡದವರಿAದ ಪ್ರತಿಷ್ಠಾ ಪೂಜಾದಿ ಕೈಂಕರ್ಯಗಳು ಜರುಗಿತು.

 
 
 
 
 
 
 
 
 
 
 

Leave a Reply