ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ನುಡಿ ಸಂಭ್ರಮ

ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ  ಬನ್ನಂಜೆ ನಾರಾಯಣಗುರು ಆಡಿಟೋರಿಯಂ ನಲ್ಲಿ ಕನ್ನಡ ನುಡಿ ಸಂಭ್ರಮ ಹಾಗೂ ದಕ್ಷ ಪೊಲೀಸ್ ಅಧಿಕಾರಿ ವಡ್ದರ್ಸೆ ಮಧುಕರ್ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಕಾರ್ಯಕ್ರಮವು ಶ್ರೀ ಟಿ. ಎ. ನಾರಾಯಣಗೌಡರು ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷತೆ ವಹಿಸಿ ನೆರವೇರಿಸಿದರು.
 ಶ್ರೀಮತಿ ಶರ್ಮಿಳಾ ಎಸ್‌. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಜಿಲ್ಲೆ. ಶ್ರೀ ಗಣಪತಿ ಕೆ. ಉಪ ನಿರ್ದೇಶಕರು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಜಿಲ್ಲೆ. ಶ್ರೀಮತಿ ಪೂರ್ಣಿಮಾ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ. ಶ್ರೀ ಸುಜಯ್ ಪೂಜಾರಿ ಜಿಲ್ಲಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ. ಶ್ರೀ ಸುನೀಲ್ ಡಿ. ಬಂಗೇರ ಅಧ್ಯಕ್ಷರು  ಮಟ್ಟು ಗುಳ್ಳ ಬೆಳೆಗಾರರ ಸಂಘ  ಮಟ್ಟು ಕಟಪಾಡಿ, ಸಂಗೊಳ್ಳಿ ರಾಯಣ್ಣ  ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕ ಮಠ ಇವರುಗಳು ಮುಖ್ಯ ಅತಿಥಿಗಳಾಗಿದ್ದರು.
ಶ್ರೀ ನೀಲಾವರ ಸುರೇಂದ್ರ ಆಡಿಗ ಸಾಹಿತಿಗಳು ಮತ್ತು ಅಧ್ಯಕ್ಷರು ಉಡುಪಿ ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್. ಡಾ. ಗಣನಾಥ ಶೆಟ್ಟಿ ಎಕ್ಕಾರು ಸಾಹಿತಿಗಳು ಮತ್ತು ಜಾನಪದ ವಿದ್ವಾಂಸರು. ಶ್ರೀ ಸುಬ್ರಮಣ್ಯ ಧಾರೇಶ್ವರ ಯಕ್ಷಗಾನ ಭಾಗವತರು ಬಡಗುತಿಟ್ಟು. ಶ್ರೀ ಎ. ಎಂ. ಮೋಹನ್ ರಾವ್ ಸಂಚಾಲಕರು ಎಂ ಎಸ್ ವಿ ಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಆರೂರು. ಸಂಜೀವ ಎ. ಬಂಗೇರ ಮಾಜಿ ಸೈನಿಕರು. ಶ್ರೀಮತಿ ಶಕುಂತಲಾ ಆರ್ ಹೆಗ್ಡೆ ಅಧ್ಯಕ್ಷರು ಶಾಲಾ ಆಡಳಿತ ಮಂಡಳಿ ವೆಂಕಬೆಟ್ಟು ಅನುದಾನಿತ ಹಿ. ಪ್ರಾ ಶಾಲೆ. 
ಉಪ್ಪೂರು ಶ್ರೀ ಗಣಪತಿ ಕಾರಂತ್ ಅಧ್ಯಕ್ಷರು ಶಾಲಾ ಆಡಳಿತ ಮಂಡಳಿ ಹಿಂದೂ ಹಿರಿಯ ಪ್ರಾಥಮಿಕ ಶಾಲೆ, ಉದ್ಯಾವರ. ರೇ ಪಾ. ವಲೇರಿಯನ್ ಮೆಂಡೋನ್ಸಾ ಸಂಚಾಲಕರು ಮಿಲಾಗ್ರೀಸ್ ಪ್ರೌಢಶಾಲೆ ಕಲ್ಯಾಣಪುರ. ಶ್ರೀ ಅನಂತರಾಜ ಭಟ್ ಸಂಚಾಲಕರು ಅನುದಾನಿತ ಎಂದು ಹಿರಿಯ ಪ್ರಾಥಮಿಕ ಶಾಲೆ ಪಾಂಗಾಳ. ಮಹಮ್ಮದ್ ಆಸಿಫ್ ಆಪತ್ಬಾಂಧವ ಸ್ಥಾಪಕ ಅಧ್ಯಕ್ಷರು ಮೈಮೂನ ಫೌಂಡೇಶನ್ ರವರುಗಳನ್ನು ಸನ್ಮಾನಿಸ ಲಾಯಿತು. ಅತಿಥಿಗಳಾಗಿ ಆಗಮಿಸಿದ ರಾಜ್ಯ ಪದಾಧಿಕಾರಿಗಳು ಹಾಗೂ ಪರ ಜಿಲ್ಲೆಯ ಜಿಲ್ಲಾಧ್ಯಕ್ಷರುಗಳು ಪದಾಧಿಕಾರಿಗಳು ಭಾಗಿಯಾಗಿದ್ದರು. 
ಈ ಕಾರ್ಯಕ್ರಮ ಜಿಲ್ಲಾ ಪದಾಧಿಕಾರಿಗಳು ತಾಲೂಕು ಅಧ್ಯಕ್ಷರುಗಳು ಹಾಗೂ ಸರ್ವ ಸದಸ್ಯರುಗಳ ಸಹಭಾಗಿತ್ವ ದಲ್ಲಿ ವಿಜೃಂಭಣೆಯಿಂದ ನೆರವೇರಿತು. ನೆರೆದ ಅತಿಥಿಗಳನ್ನು ಜಿಲ್ಲಾ ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ಶ್ರೀಮತಿ ಗೀತಾ ಪಾಂಗಾಳ ಸ್ವಾಗತಿಸಿದರು. ವರದಿ ವಾಚನವನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್ ಮಂಡಿಸಿದರು. ಜಿಲ್ಲಾ ಗೌರವಾಧ್ಯಕ್ಷರಾದ ನೇರಿ ಕರ್ನೇಲಿಯೋ ಪ್ರಾಸ್ತಾವಿಕ ಭಾಷಣ ಮಾಡಿದರು. 98.3FM ಆರ್ ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಹಿಳಾ ಕಾರ್ಯದರ್ಶಿ ಅನುಷಾ ಧನ್ಯವಾದ ಸಮರ್ಪಿಸಿದರು.
 
 
 
 
 
 
 
 
 
 
 

Leave a Reply