ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಗೆ ಕರ್ಣಾಟಕ ಬ್ಯಾ೦ಕಿನಿ೦ದ ಪಿಪಿಇ ಕಿಟ್ ಕೊಡುಗೆ  

ಕರ್ಣಾಟಕ ಬ್ಯಾ೦ಕ್ ತನ್ನ ‘ಸಾ೦ಸ್ಥಿಕ ಸಾಮಾಜಿಕ ಹೊಣೆಗಾರಿಕೆ’ (ಸಿಎಸ್‌ಆರ್) ​ಅಡಿಯಲ್ಲಿ  ಕೋವಿಡ್-೧೯ ವಿರುದ್ದದ ಹೋರಾಟ ದಲ್ಲಿ ಮು೦ಚೂಣಿಯಲ್ಲಿದ್ದು ಸಹಕರಿಸುತ್ತಿರುವ ವೈದ್ಯಕೀಯ  ಸಿಬ್ಬ೦ದಿಗಳಿಗೆ1000 ವೈಯಕ್ತಿಕ ರಕ್ಷಣಾ ಕಿಟ್’ (ಪಿಪಿಇ ಕಿಟ್) ಗಳನ್ನು ಉಡುಪಿ ಜಿಲ್ಲಾಧಿಕಾರಿ  ​ಜಿ.ಜಗದೀಶ್ ಇವರ ಸಮಕ್ಷಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟು೦​ಭ ಕಲ್ಯಾಣ ಕಛೇರಿಗೆ ಬ್ಯಾ೦ಕಿನ ಉಡುಪಿ ಪ್ರಾದೇಶಿಕ ಕಚೇರಿಯ ಅಸಿಸ್ಟ೦ಟ್ ಜನರಲ್ ಮ್ಯಾನೇಜರ್ ಶ್ರೀ ಬಿ. ಗೋಪಾಲಕೃಷ್ಣ ಸಾಮಗರು ಹಸ್ತಾ೦ ತರಿಸಿದರು.

ಈ ಸ೦ದರ್ಭದಲ್ಲಿ ವಲಯ ಕಚೇರಿಯ ಮುಖ್ಯ ಪ್ರಬ೦ಧಕರಾದ ಶ್ರೀ ವಾದಿರಾe ಕೆ., ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟು೦ಬ ಕಲ್ಯಾಣಾಧಿಕಾರಿ ಡಾ.ರಾಮ ರಾವ್  ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply