ಸ್ವಚ್ಛ ಭಾರತ ದಿನಾಚರಣೆಯ  ಅಂಗವಾಗಿ ಸ್ವಚ್ಛತಾ ಹಿಃ ಸೇವಾ ಆಂದೋಲನ

ಸ್ವಚ್ಛ ಭಾರತ ದಿನಾಚರಣೆಯ ಅಂಗವಾಗಿ ಸ್ವಚ್ಛತಾ ಹಿಃ ಸೇವಾ ಆಂದೋಲನದ ಅಡಿಯಲ್ಲಿ ಇಂದು ಪೂರ್ಣಪ್ರಜ್ಞ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು ಮಲ್ಪೆ ಬೀಚ್ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಂಡಿದ್ದು, ಕಾರ್ಯಕ್ರಮದ ಆರಂಭದಲ್ಲಿ ಎಲ್ಲಾ ಶಿಬಿರಾರ್ಥಿಗಳು ಮತ್ತು ಯೋಜನಾಧಿಕಾರಿಗಳು ಸ್ವಚ್ಛತಾ ಪ್ರತಿಜ್ಞೆ ಕೈಗೊಂಡರು. 60 ಜನ ಮಕ್ಕಳು ಇದರಲ್ಲಿ ಭಾಗವಹಿಸಿದ್ಧರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಶ್ರೀಮತಿ ಸುಮರ್ಣ, ಸಂದೀಪ್ ಶೆಟ್ಟಿ, ಸಹ ಯೋಜನಾಧಿಕಾರಿಗಳಾದ ಡಾ.ನಾಗರಾಜ್.ಜಿ.ಪಿ., ಕುಮಾರಿ ಸ್ವಾತಿ ಅವರು ಹಾಜರಿದ್ದರು.

 
 
 
 
 
 
 
 
 
 
 

Leave a Reply