ಬ್ರಹ್ಮಾವರ ನಮ್ಮನೆ ಮಗು~ ಬಹುಮಾನ ವಿತರಣಾ ಸಮಾರಂಭ 

ಸೌತ್ ಕೆನರಾ  ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಿ. ದಕ ಹಾಗು ಉಡುಪಿ ಜಿಲ್ಲೆ  ಇದರ ಬ್ರಹ್ಮಾವರ ವಲಯದ ನಮ್ಮನೆ ಮಗು ಕಾರ್ಯಕ್ರಮವು ನವಂಬರ್ 26 ಭಾನುವಾರ ಸಂಜೆ 4ಗಂಟೆಗೆ ಬ್ರಹ್ಮಾವರ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಲಿದೆ.
ಬ್ರಹ್ಮಾವರ ವಲಯದ ಅಧ್ಯಕ್ಷ ಆಲ್ವಿನ್ ಅಂದ್ರಾದೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಉಡುಪಿ ಎಸ್ ಕೆ ಪಿ ಎ ವಲಯದ ನಿಕಟಪೂರ್ವ ಅಧ್ಯಕ್ಷ ಹಾಗೂ ಪತ್ರಕರ್ತ ಜನಾರ್ಧನ್ ಕೊಡವೂರು ಉದ್ಘಾಟಿಸಲಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ೫೫೦ ಮಕ್ಕಳಿಗೂ ಅವರ ಭಾವಚಿತ್ರ ಇರುವ ಫೋಟೋ ಫ್ರೇಮ್ ಉಚಿತವಾಗಿ ನೀಡಲಾಗುವುದು.  
ಈ ಸಂದರ್ಭದಲ್ಲಿ ಜಿಲ್ಲಾ ಛಾಯಾ ಪ್ರತಿನಿಧಿ ರವಿ ಕೋಟ್ಯಾನ್, ಬ್ರಹ್ಮಾವರ ವಲಯದ ಗೌರವಾಧ್ಯಕ್ಷ ರಾಘವೇಂದ್ರ ಪೂಜಾರಿ,  ಮಾತೃ ಸಂಸ್ಥೆಯ ಜೊತೆ ಕಾರ್ಯದರ್ಶಿ ಹೇರಿಕ್ ಡಿಸೋಜಾ,  ಬ್ರಹ್ಮಾವರ ವಲಯ ಛಾಯಾ ಪ್ರತಿನಿಧಿ ಪ್ರದೀಪ್ ಉಪ್ಪೂರು ಉಪಸ್ಥಿತರಿರುವರೆಂದು ವಲಯದ ಪ್ರಧಾನ ಕಾರ್ಯದರ್ಶಿ ಪ್ರತೀಶ್ ಕುಮಾರ್ ಹಾಗೂ ಕೋಶಾಧಿ ಕಾರಿ ಹರೀಶ್ ತೆಕ್ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply