ಮೂರು ದಶಕದ ಗಂಟು “ನಂಟು” ಕಳೆದ ಜಿಲ್ಲಾಸ್ಪತ್ರೆಯ ತಜ್ಞ ವೈದ್ಯರು

ಸುಮಾರು 32 ವರ್ಷಗಳಿಂದ ದುರ್ಮಾಂಸ ಗಡ್ಡೆಯಿಂದ ಬಳಲುತ್ತಿದ್ದ ಮಹಿಳೆಗೆ ಶಸ್ತ್ರ ಚಿಕಿತ್ಸೆಯ ಮೂಲಕ ಸುಮಾರು 8 ಕೆ.ಜಿ. ದುರ್ಮಾಂಸ ಯಶಸ್ವಿಯಾಗಿ ಹೊರತೆಗೆದ ಉಡುಪಿಯ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞರು.

ಕಾರ್ಕಳದ ನಿವಾಸಿಯಾದ ಶ್ರೀಮತಿ ಪುಪ್ಪಾ, 71 ವರ್ಷ ಪ್ರಾಯದ ಮಹಿಳೆ ಇವರು ಸುಮಾರು ಭುಜದ ಭಾಗದ ದುರ್ಮಾಂಸ ಗಡ್ಡೆಯಿಂದ ಸುಮಾರು 32 ವರ್ಷಗಳಿಂದ ಬಳಲುತ್ತಿದ್ದು ಅಜ್ಜರಕಾಡುನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.

ದಿನಾಂಕ 26.06.2024 ರಂದು ಇವರಿಗೆ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸ ತಜ್ಞರಾಗಿರುವ ಡಾ.ಸುಜಿತ್ ಇವರು ಶಸ್ತ್ರಚಿಕಿತ್ಸಾ ತಂಡದೊಂದಿಗೆ ಸುಮಾರು 3 ಗಂಟೆಗಳವರೆಗೆ ಶಸ್ತ್ರಚಿಕಿತ್ಸೆ ನಡೆಸಿ 8 ಕೆ.ಜಿ ದುರ್ಮಾಂಸ ಗಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಆಸ್ಪತ್ರೆಯ ಜನರಲ್ ಸರ್ಜನ್ ಆಗಿರುವ ಡಾ.ಸುಜಿತ್ ಇವರ ನೇತ್ರತ್ವದಲ್ಲಿ ಅರವಳಿಕೆ ತಜ್ಞರಾದ ಡಾ.ಉಮೇಶ್ ಉಪಾಧ್ಯಾಯ ಹಾಗೂ ಡಾ.ವಿಶ್ವನಾಥ್ ಶೆಟ್ಟಿ ಹಾಗೂ ನುರಿತ ಶುಶ್ರುಷಕ ಅಧಿಕಾರಿಯವರ, ಸಹಯೋಗದೊಂದಿಗೆ ಈ ಶಸ್ತ್ರ ಚಿಕಿತ್ಸೆ ನಡೆಲಾಗಿದೆ.

ಹಾಗೂ ರೋಗಿಯು ಈಗ ಜಿಲ್ಲಾಸ್ಪತ್ರೆಯ ಒಳರೋಗಿ ವಿಭಾಗದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ವಿಶೇಷ ಕಾಳಜಿಯೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿರುವುದು ಶ್ಲಾಘನೀಯ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ। ಅಶೋಕ್  ಇಡೀ ತಂಡವನ್ನು ಶ್ಲಾಘಿಸಿದ್ದಾರೆ.

 
 
 
 
 
 
 
 
 
 
 

Leave a Reply