ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವಿಂಶತಿ ವರ್ಷದ ಪ್ರಯುಕ್ತ  ಉಚಿತ ಆರೋಗ್ಯ ಮಾಹಿತಿ. 

ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವತಿಯಿಂದ ವಿಂಶತಿ ವರ್ಷದ ಪ್ರಯುಕ್ತ ನಡೆದ ಉಚಿತ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಚಿಟ್ಪಾಡಿ ಶ್ರೀನಿವಾಸ ದೇವಸ್ಥಾನದ ಮೊಕ್ತೇಸರ ಹಾಗೂ ಸಭಾದ ಗೌರವಾಧ್ಯಕ್ಷ ಡಾ ಗೋಪಾಲಕೃಷ್ಣ ಬಲ್ಲಾಳ್ ಉದ್ಘಾಟಿಸಿದರು.
 
ಉಡುಪಿಯ ಪ್ರಸಿದ್ದ ಮಧುಮೇಹ ತಜ್ಞೆ ಹಾಗೂ ಕುಟುಂಬ ವೈದ್ಯೆ ಡಾ ಶೃತಿ ಬಲ್ಲಾಳ್ ಡಯಾಬಿಟಿಸ್ ಕುರಿತು ತಿಳುವಳಿಕೆ, ತಡೆಗಟ್ಟುವ ಕ್ರಮ, ಅಹಾರ ಪದ್ದತಿ ಹಾಗೂ ವ್ಯಾಯಮದ ಕುರಿತು ಚಿತ್ರ ಸಹಿತ ಮಾಹಿತಿ ಹಾಗೂ ಡಯಾಬಿಟಿಸ್ ಬಗ್ಗೆ ಸದಸ್ಯರಿಗಿದ್ದ ಸಂದೇಹ, ಅನುಮಾನಗಳ ಪ್ರಶ್ನೆಗಳಿಗೆ ಉತ್ತರಿಸಿದರು.
 
ವೇದಿಕೆಯಲ್ಲಿ ಸಭಾದ ಸ್ಥಾಪಕಾಧ್ಯಕ್ಷ ಪ್ರೋ ವೇಣುಗೋಪಾಲ ಮುಳ್ಳೇರಿಯ  ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ರಜನಿ ಮುಳ್ಳೇರಿಯಾ ಹಾಗೂ ನಾಗರತ್ನಾ ಬಾಯರಿ ಪ್ರಾರ್ಥಿಸಿದರು. ಸಭಾದ ಅಧ್ಯಕ್ಷ ವಿಶ್ವನಾಥ ಬಾಯರಿ ಸ್ವಾಗತಿಸಿದರು.ಕಾರ್ಯದರ್ಶಿ ಕೃಷ್ಣರಾಜ್ ಬಲ್ಲಾಳ್ ವಂದಿಸಿದರು.
 
ಅಖಿಲಾ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.ಸಭಾದ ಸದಸ್ಯರ ರಕ್ತ ಪರೀಕ್ಷೆ ಹಾಗೂ ರಕ್ತದೊತ್ತಡ ಪರೀಕ್ಷೆಗಳನ್ನು ಡಾ। ಸ್ವೀಕೃತಾ ಬಲ್ಲಾಳ್, ಡಾ। ರಾಧಿಕಾ ಬಲ್ಲಾಳ್ ಹಾಗೂ ಹರೀಶ  ಕೊಡಂಚ ನಡೆಸಿಕೊಟ್ಟರು. 
 
 
 
 
 
 
 
 
 
 
 

1 COMMENT

Leave a Reply