ಗಾಂಧಿ ಆಸ್ಪತ್ರೆಯ ವತಿಯಿಂದ ಮುಖ್ಯ ಶಿಕ್ಷಕಿ ನಿರ್ಮಲಾ ಬಿ. ರಾವ್ ಇವರಿಗೆ ಸನ್ಮಾನ

ಶಿಕ್ಷಣ ವೃತಿಯಲ್ಲಿ ವಿಶೇಷ ಸೇವೆ ಸಲ್ಲಿಸಿದ ವಳಕಾಡು ಸರಕಾರಿ ಸಂಯುಕ್ತ ಫ್ರೌಡಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ನಿರ್ಮಲಾ ಬಿ. ರಾವ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲೆಯ ಅತಿದೊಡ್ಡ ಸರಕಾರಿ ಶಾಲೆಗಳಲ್ಲೊಂದಾದ ವಳಕಾಡು ಫ್ರೌಡಶಾಲೆಯಲ್ಲಿ ೨೦೧೧ ರಿಂದ ಮುಖ್ಯೋಪಾಧ್ಯಾಯಿನಿಯಾಗಿ ಚುಕ್ಕಾಣಿ ಹಿಡಿದು ತಮ್ಮ ಪರಿಶ್ರಮ, ನಿಸ್ವಾರ್ಥ ಸೇವೆಯೊಂದಿಗೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ, ಮೂಲಭೂತ ಸೌಲಭ್ಯಗಳ ಕೊರತೆಯನ್ನು ಸಂಘ- ಸ೦ಸ್ಥೆ ಮತ್ತು ಹಳೆ ವಿದ್ಯಾರ್ಥಿಗಳೊಂದಿಗೆ ಹೊಂದಿಸಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ  ಮಟ್ಟದಲ್ಲಿ ಗುರುತು ಮೂಡಿಸಿ ಸಾಧನೆಗಳ ಸರಮಾಲೆಯ ಸಾಕ್ಷಿಯಾಗಿರುವ ಈ ಶಾಲೆಯ ಸಾಧನೆಯ ಹಿಂದೆ ಶ್ರೀಮತಿ ನಿರ್ಮಲಾ ಬಿ. ಅವರ ನಿಸ್ವಾರ್ಥ ವಿಶೇಷ ಸೇವೆಯನ್ನು ಪರಿಗಣಿಸಿ ಉಡುಪಿಯ ಗಾಂಧಿ ಆಸ್ಪತ್ರೆ ಮತ್ತು ಪಂಚಮಿ ಟ್ರಸ್ಟ್ ವತಿಯಿಂದ ಸನ್ಮಾನಿಸ ಲಾಯಿತು.
ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಎಂ. ಹರಿಶ್ಚ೦ದ್ರ, ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಪಂಚಮಿ ಟ್ರಸ್ಟ್ನ ಶ್ರೀಮತಿ ಲಕ್ಷ್ಮೀ  ಹರಿಶ್ಚಂದ್ರ, ವಳಕಾಡು ಸರಕಾರಿ ಸಂಯುಕ್ತ ಫ್ರೌಡಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀ ನಾಗಭೂಷಣ ಶೇಟ್ ಮತ್ತು ಶಿಕ್ಷಕವೃಂದದವರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply